Site icon Suddi Belthangady

ಅರ್ಹ ಕುಟುಂಬಕ್ಕೆ ಆಹಾರ ಸಾಮಾಗ್ರಿ ವಿತರಣೆ

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕೂಳೂರು ನಿವಾಸಿ, ಮಕ್ಕಳಿಲ್ಲದ ವಿಧವೆ ಒಂಟಿ ಮಹಿಳೆ, ಎರಡೂ ಮೊಣಕಾಲು ನೋವಿನಿಂದ ಅನೇಕ ತಿಂಗಳುಗಳಿಂದ ಕೆಲಸಕ್ಕೆ ಹೋಗದೆ ಸಮಸ್ಯೆ ಎದುರಿಸುತ್ತಿರುವ ಲೀಲಮ್ಮ (63) ಅವರ ಸಂಕಷ್ಟ ಮನಗಂಡು ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಹಿರಿಯ ಸದಸ್ಯೆ ಲ.ಸುಶೀಲಾ ಎಸ್ ಹೆಗ್ಡೆ ಅವರು ಆಹಾರದ ಕಿಟ್ ನೀಡುವ ಮೂಲಕ ಸಾಂತ್ವಾನ ಹೇಳಿದರು.

ಅವರ ಜೊತೆ ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕ ಉಮೇಶ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಸದಸ್ಯ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ಅವರ ಮನೆಯಲ್ಲಿ ಈ ಕಾರ್ಯಕ್ರಮ ಸಂಯೋಜಿಸಿದರು.

Exit mobile version