Site icon Suddi Belthangady

ಬೆಳಾಲು ಮಾಯ ಮಹದೇವ ದೇವಸ್ಥಾನದ ಜಾತ್ರೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳಾಲು: ಇಲ್ಲಿಯ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಫೆ.20 ರಿಂದ 24 ರವರೆಗೆ ನಡೆಯಲಿದೆ.ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಜ.24 ರಂದು ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಪದ್ಮ ಗೌಡ, ಮಾಯಗುತ್ತು ಪುಷ್ಪದಂತ ಜೈನ್, ಅರ್ಚಕ ಕೇಶವ ರಾಮಯಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರಾಜಪ್ಪ ಗೌಡ, ಗಂಗಯ್ಯ ಗೌಡ, ನಾಣ್ಯಪ್ಪ ಪೂಜಾರಿ, ಸುಕನ್ಯಾ ನಾರಾಯಣ ಸುವರ್ಣ, ದಿನೇಶ ಎಂ.ಕೆ., ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ, ಬೆಳಾಲು ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಮಾಯ ಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ, ಗೌರವ ಅಧ್ಯಕ್ಷ ಕೃಷ್ಣಪ್ಪ ಗೌಡ, ಸಹ ಸಂಚಾಲಕಿ ಸುಜಾತಾ ಮಂಜುಶ್ರೀ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ರಾಘವೇಂದ್ರ, ಸೇವಾ ಪ್ರತಿನಿಧಿ ಪ್ರಭಾ ದಿನೇಶ್, ರುಕ್ಮಯ್ಯ ಗೌಡ ಪರಾರಿ, ನಾರಾಯಣ ಮಡಿವಾಳ, ಅಶ್ವಥ್ ಗುಂಡ್ಯ, ಶೀಲಾವತಿ ಧರ್ಮೇಂದ್ರ, ಪ್ರಭಾಕರ ಮಡಿವಾಳ, ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು, ಭಕ್ತರು ಹಾಜರಿದ್ದರು.

Exit mobile version