Site icon Suddi Belthangady

ಉಜಿರೆ ಚಾವಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ರಾಮ ತಾರಕ ಮಂತ್ರ ಭಜನೆ

ಉಜಿರೆ: ಉಜಿರೆ ಗ್ರಾಮದ ಪೆರ್ಲ ಚಾವಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಯೋದ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆ ಅಂಗವಾಗಿ ಶ್ರೀ ರಾಮ ತಾರಕ ಮಂತ್ರ ಭಜನೆ, ರಾಮತಾರಕ ಯಜ್ಞ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಆಡಳಿತ ಮೋಕ್ತೆಸರ ಸುಮೇದ್ ಭಟ್ ನೇತೃವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಜನಾ ಮಂಡಳಿ, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಿದರು.ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಫಲಹಾರ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಕರ ಸೇವಕ ಉಜಿರೆ ರಮೇಶ್ ಶೆಣೈ ಇವನ್ನು ಗೌರವಿಸಲಾಯಿತು.

Exit mobile version