Site icon Suddi Belthangady

ದೆಂಜೋಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ರಾಮತಾರಕ ಮಂತ್ರ ಹೋಮ

ಗರ್ಡಾಡಿ: ಅಯೋಧ್ಯೆಯ ಪರಮ ಪಾವನ ಕ್ಷೇತ್ರದಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಮತ್ತು ಶ್ರೀ ರಾಮ ಮಂದಿರದ ಲೋಕಾರ್ಪಣೆಯ ಈ ಪುಣ್ಯಕಾಲದಲ್ಲಿ ದೆಂಜೋಳಿ ಪೇರಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ
ರಾಮತಾರಕಮಂತ್ರ ಹೋಮ ಸಹಸ್ರ ದೀಪೋತ್ಸವ ಮತ್ತು ಭಜನಾ ಕಾರ್ಯಕ್ರಮದೊಂದಿಗೆ ಶ್ರೀ ರಾಮೋತ್ಸವ ಶಾಸಕ ಹರೀಶ್ ಪೂಂಜರ ಉಪಸ್ಥಿತಿಯಲ್ಲಿ ನಡೆಯಿತು.

ಗರ್ಡಾಡಿ ನಾಲ್ಕೂರು ಶ್ರೀ ರಾಮ ಭಕ್ತರ ನೇತೃತ್ವದಲ್ಲಿ ಜರಗಿತು.

ಗರ್ಡಾಡಿ ಗ್ರಾಮದ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿಯ ಮಕ್ಕಳಿಗೆ ಹಾಗೂ ನಾಲ್ಕೂರು ಗ್ರಾಮದಲ್ಲಿರುವ ರಾಮನಗರದ ಅಂಗನವಾಡಿಯ ಮಕ್ಕಳಿಗೆ ಮಧ್ಯಾಹ್ನದ ಅನ್ನಸಂತರ್ಪಣೆಯನ್ನು
ಆಯಾಯ ಶಾಲೆಗೆ ವಿತರಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

Exit mobile version