Site icon Suddi Belthangady

ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ- ಸಂತೆಕಟ್ಟೆಯ ಲಕ್ಷ್ಮೀ ಹೋಟೆಲ್ ನಲ್ಲಿ ಉಚಿತ ಊಟ ನೀಡಿದ ಎಸ್.ಕೆ.ಟ್ರೇಡರ್ಸ್ ನ ಮಾಲಕ ಭಾಸ್ಕರ್ ಶೆಟ್ಟಿ

ಬೆಳ್ತಂಗಡಿ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಜ.22ರಂದು ನಡೆದ ಪ್ರಾಣಪ್ರತಿಷ್ಠಾಪನ ಸಲುವಾಗಿ ಸಂತೆಕಟ್ಟೆಯ ಕುತ್ಯಾರು ದೇವಾಲಯಕ್ಕೆ ತೆರಳುವ ರಸ್ತೆ ಸಮೀಪವಿರುವ ಲಕ್ಷ್ಮೀ ಹೋಟೆಲ್ ನಲ್ಲಿ ಎಸ್.ಕೆ.ಟ್ರೇಡರ್ಸ್ ನ ಮಾಲಕ ಭಾಸ್ಕರ್ ಶೆಟ್ಟಿ ಉಚಿತ ಊಟ ನೀಡಿದ್ದಾರೆ.ವಿಶೇಷವಾಗಿ ಊಟದಲ್ಲಿ ಅನ್ನ, ಸಾರು, ಸಾಂಬಾರು, ಪಲ್ಯ, ಗಸಿ, ಪಾಯಸ, ಲಡ್ಡು, ಮೊಸರು ಹಾಗೂ ಮಜ್ಜಿಗೆ ಇತ್ತು.

ಜನರಿಗೆ ಊಟ ಮಾಡಿ ಬಿಲ್ ಕೊಡುವಾಗ ಬಿಲ್ ಇಲ್ಲ ಎಂದಾಗ ಆಶ್ಚರ್ಯವಾಗಿತ್ತು.ಒಟ್ಟಿನಲ್ಲಿ ತಾನು ಮಾಡಿದ ಸೇವೆಯನ್ನು ಯಾರಿಗೂ ತಿಳಿಸದೇ ಇಂದು ಸುಮಾರು 100ಕ್ಕಿಂತ ಅಧಿಕ ಮಂದಿ ಭೋಜನ ಸವಿದಿದ್ದಾರೆ ಎಂದು ಹೋಟೆಲ್ ಮಾಲಿಕ ರಾಜೇಶ್ ಶೆಟ್ಟಿ ಸುದ್ದಿ ಬಿಡುಗಡೆ ಪತ್ರಿಕೆಗೆ ಹೇಳಿದರು‌.

Exit mobile version