Site icon Suddi Belthangady

ಕೆನರಾ ಕೈಗಾರಿಕಾ ಸಂಘದ ನಿರ್ದೇಶಕರಾಗಿ ಸುಂದರ ಗೌಡ ಬಳ್ಳಕ್ಕ ಆಯ್ಕೆ

ಬೆಳ್ತಂಗಡಿ: ಕೆನರಾ ಕೈಗಾರಿಕಾ ಸಂಘ ಬೈಕಂಪಾಡಿ ಇದರ ನಿರ್ದೇಶಕರಾಗಿ ಬೈಕಂಪಾಡಿ ಎಸ್.ಜೆ.ಆರ್.ಟೆಕ್ನಾಲಜೀಸ್ ಮಾಲಕ ಸುಂದರ ಗೌಡ ಚುನಾಯಿತರಾಗಿದ್ದಾರೆ.

ಸುಳ್ಯ ಗುತ್ತಿಗಾರು ಸಮೀಪದ ಬಳ್ಳಕ್ಕದ ನಿವಾಸಿಯಾಗಿರುವ ಇವರು ಕಾಣಿಯೂರಿನ ಅಬೀರ ಕುಟುಂಬದವರು.ದಿ.ಧರ್ಮಪಾಲ ಗೌಡ ಹಾಗೂ ದಿ.ರಾಮಕ್ಕ ದಂಪತಿಯ ಪುತ್ರರಾದ ಇವರು ಸುಮಾರು 20 ವರ್ಷಗಳಿಂದ ಮಂಗಳೂರಿನಲ್ಲಿ ಎಸ್.ಜೆ.ಆರ್ ಟೆಕ್ನಾಲಜೀಸ್ ಮುನ್ನಡೆಸುತ್ತಿದ್ದಾರೆ.

ಇವರು ಬೆಳ್ತಂಗಡಿ ತಾಲೂಕಿನ ಉಜಿರೆ ಚಾಮುಂಡಿನಗರದ ನಿವೃತ್ತ ಫಾರೆಸ್ಟ್ ಗಾರ್ಡ್ ದಿ.ದರ್ಣಪ್ಪ ಗೌಡ ಮತ್ತು ಚಂದ್ರಾವತಿ ದಂಪತಿಯ ಅಳಿಯ.

Exit mobile version