Site icon Suddi Belthangady

ಸುಜ್ಞಾನ ಸಂಜೀವಿನಿ ಮಹಿಳಾ ಒಕ್ಕೂಟದ ಪ್ರಾಯೋಜಕತ್ವದಲ್ಲಿ ಕಾರುಣ್ಯ ಹಾಳೆ ತಟ್ಟೆ ಕೃಷಿ ಉತ್ಪಾದಕರ ಸಂಘದ ಉದ್ಘಾಟನಾ ಕಾರ್ಯಕ್ರಮ

ಮಿತ್ತಬಾಗಿಲು: ಸುಜ್ಞಾನ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ಪ್ರಾಯೋಜಕತ್ವದಲ್ಲಿ ಕಾರುಣ್ಯ ಹಾಳೆ ತಟ್ಟೆ ಕೃಷಿ ಉತ್ಪಾದಕರ ಸಂಘದ ಉದ್ಘಾಟನಾ ಕಾರ್ಯಕ್ರಮ ಗಣೇಶ ನಗರ ದರ್ಖಾಸು ಸುಪ್ರಿಯಾ ಮನೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ವತ್ಸಲ.ಕೆ ಉಪಸ್ಥಿತಿಯಲ್ಲಿ ನಡೆಯಿತು.

ಒಕ್ಕೂಟದ ಉಪಾಧ್ಯಕ್ಷೆ ವಿಜಯ.ಕೆ. ಹಾಗೂ ಮಿತ್ತಾಬಾಗಿಲು ಉತ್ಪಾದಕರ ಸಂಘದ ಕಾರ್ಯದರ್ಶಿ ವಿನೋದ ಉದ್ಘಾಟಿಸಿದರು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ, ವಲಯ ಮೇಲ್ವಿಚಾರಕ ಜಯಾನಂದ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಶಿವಾನಂದ ರಾವ್ ಕಕ್ಕೆನೇಜಿ, ಸಲಹೆಗಾರ ಕಮಲ ಆನಂದ ಗೌಡ, ಕೃಷಿ ಉದ್ಯೋಗ ಸಖಿ, ಕೃಷಿ ಸಖಿ, ಪಶು ಸಖಿ, ಮತ್ತು ಮಲವಂತಿಗೆ ಗ್ರಾಮ್ ಪಂಚಾಯತ್ ಎಂಬಿಕೆ ಉಪಸ್ಥಿತರಿದ್ದರು.

ಎಲ್‌ಸಿಆರ್‌ಪಿ ವನಿತಾ ಸ್ವಾಗತಿಸಿದರು, ಎಂಬಿಕೆ ಸುಷ್ಮಾ ವಂದಿಸಿದರು.

Exit mobile version