Site icon Suddi Belthangady

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮುಂಡಾಜೆಯ ಸಮರ್ಥ್.ಕೆ.ಎಸ್, ಸಮೀಕ್ಷಾ.ಎಸ್ ಸಾಧನೆ

ಬೆಳ್ತಂಗಡಿ: ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಬಿ.ಸಿರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ಜ.14ರಂದು ನಡೆಯಿತು.

ಮುಂಡಾಜೆ ಕ್ರೈಸ್ಟ್ ಅಕಾಡೆಮಿಯ ನಾಲ್ಕನೇ ತರಗತಿ ವಿದ್ಯಾರ್ಥಿ ಸಮರ್ಥ್.ಕೆ.ಎಸ್ ಕುಮಿಟೆಯಲ್ಲಿ ಪ್ರಥಮ ಸ್ಥಾನ ಹಾಗೂ ಕಟದಲ್ಲಿ ದ್ವಿತೀಯ ಸ್ಥಾನ ಮತ್ತು ಎರಡನೇ ತರಗತಿ ವಿದ್ಯಾರ್ಥಿನಿ ಸಮೀಕ್ಷಾ.ಎಸ್ ಕುಮಿಟೆಯಲ್ಲಿ ಪ್ರಥಮ ಸ್ಥಾನ, ಕಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಮುಂಡಾಜೆಯ ನೆಯ್ಯಾಲುವಿನ ಯೋಧ ಶಶಿಧರ.ಕೆ.ಎಸ್ ಮತ್ತು ಭವ್ಯ ದಂಪತಿಯ ಮಕ್ಕಳಾದ ಇವರಿಗೆ ಮುಂಡಾಜೆಯ ಜಿತೇಶ್.ಬಿ.ಎಸ್ ತರಬೇತಿ ನೀಡಿರುತ್ತಾರೆ.

Exit mobile version