Site icon Suddi Belthangady

ಕಾರಿಂಜ ಬಾಯ್ತಾರು ಶಾಲಾ ವಾರ್ಷಿಕೋತ್ಸವ

ಬೆಳ್ತಂಗಡಿ: ದ.ಕ.ಜಿ.ಪ.ಸ.ಕಿ.ಪ್ರಾ.ಶಾಲೆ ಕಾರಿಂಜ ಬಾಯ್ತಾರು ಇಲ್ಲಿ ಪ್ರತಿಭಾ ಸಿಂಚನ ಕಾರ್ಯಕ್ರಮವು ಎಸ್.ಡಿ.ಎಂ.ಸಿ ಅಧ್ಯಕ್ಷ ಜಗನ್ನಾಥ ರೈ ನೀನಿ ಇವರ ನೇತೃತ್ವದಲ್ಲಿ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಇವರು ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಶಾಲಾ ಮುಖ್ಯ ಶಿಕ್ಷಕಿ ಗಿರಿಜರವರು ಸ್ವಾಗತಿಸಿದರು.

ದಿಕ್ಸೂಚಿ ಭಾಷಣವನ್ನು ಪ್ರೊ.ಸುಬ್ಬಪ್ಪ ಕೈಕಂಬ ಪ್ರಾಂಶುಪಾಲರು ಸ.ಪ್ರ.ದ.ಕಾಲೇಜು ಉಪ್ಪಿನಂಗಡಿ ಇವರು ಮಾತನಾಡಿದರು.

ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷ ಯಂ.ಈಶ್ವರ ಭಟ್ ಮಾಯಿಲ್ತೋಡಿ, ಗ್ರಾ.ಪಂ.ಸದಸ್ಯೆ ಉಮಾವತಿ, ಅಂಗನವಾಡಿ ಕಾರ್ಯಕರ್ತೆ ಶಶಿಪ್ರಭ, ನಿವೃತ್ತ ಶಿಕ್ಷಕ ಪಿ.ಧರ್ಣಪ್ಪ ನಾಯ್ಕ, ನಿವೃತ್ತ ಯೋಧ ಜೆ.ಕೆ ಪೂಜಾರಿ, ಉದ್ಯಮಿ ದಾಸಪ್ಪ ಗೌಡ ಕೋಡಿಯಡ್ಕ, ಹಳೆ ವಿದ್ಯಾರ್ಥಿ ಸಂಘದ ನಾಯಕ ಪ್ರಸಾದ್ ಶೆಟ್ಟಿ ಕೆರ್ಪುಣಿ, ವಿದ್ಯಾರ್ಥಿ ಸಂಘದ ನಾಯಕ ಮುಹಮ್ಮದ್ ರಿಯಾನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷ ಈಶ್ವರ ಭಟ್ ಮಾಯಿಲ್ತೋಡಿ, ಸ್ಥಾಪಕ ಶಿಕ್ಷಕ ಚಂದ್ರಶೇಖರ, ಸ್ಥಾಪಕ ವಿದ್ಯಾರ್ಥಿ ಯತೀಶ್ ಇವರನ್ನು ಸನ್ಮಾನಿಸಲಾಯಿತು.

ಸಭೆಯ ಬಳಿಕ ವಿಠಲ್ ನಾಯಕ್ ಇವರಿಂದ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.

ಅಂಗನವಾಡಿ ಕೇಂದ್ರ, ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮ ನಡೆಯಿತು.

ಶಾಲಾ ಶಿಕ್ಷಕ ಪರಮೇಶ್ವರ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Exit mobile version