Site icon Suddi Belthangady

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ.ಶಾಲಾ ವಿದ್ಯಾರ್ಥಿ ರಾಜೇಶ್ ರಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವ್ಯಕ್ತಿ ಚಿತ್ರ ರಚನೆ

ಧರ್ಮಸ್ಥಳ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ರಾಜೇಶ್ ಇವರು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವ್ಯಕ್ತಿ ಚಿತ್ರವನ್ನು ರಚಿಸಿ, ಪೂಜ್ಯರಿಗೆ ನೀಡಿದರು.

ವ್ಯಕ್ತಿ ಚಿತ್ರದಲ್ಲಿನ ನೈಜತೆಯನ್ನು ಗಮನಿಸಿ, ಪೂಜ್ಯರು ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಅಪಾರ ಸಂತಸ ವ್ಯಕ್ತಪಡಿಸಿ, ಕಲೆ ಎಂಬುದು ಒಲಿದು ಬರಬೇಕು.ಅದು ಎಳವೆಯಲ್ಲಿ ಬಂದಿದೆ.ಅದನ್ನು ಭವಿಷ್ಯದಲ್ಲಿ ಇನ್ನೂ ಹೆಚ್ಚು ಎತ್ತರಕ್ಕೆ ಏರಿಸುವಂತಾಗಲಿ ಎಂದು ಶುಭ ಹಾರೈಸಿ, ಆಶೀರ್ವಾದ ಮಾಡಿದರು.

ಶಾಲೆಯ ಚಿತ್ರಕಲಾ ಶಿಕ್ಷಕ ರೂಪೇಶ್ ಇವರು ಮಾರ್ಗದರ್ಶನ ನೀಡಿದ್ದರು.

Exit mobile version