Site icon Suddi Belthangady

ಬೆಳಾಲು: ಮಾಯ ಗಾಂಧಿನಗರದಲ್ಲಿ ಮಂತ್ರದೇವತೆ, ಕೊರಗಜ್ಜ ನೇಮ

ಬೆಳಾಲು: ಬೆಳಾಲು ಗ್ರಾಮದ ಮಾಯ ಗಾಂಧಿನಗರದಲ್ಲಿ ಜ.12 ರಂದು ಮಂತ್ರದೇವತೆ, ಕೊರಗಜ್ಜ ನೇಮೋತ್ಸವ ನಡೆಯಿತು.

ಬೆಳಿಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ವೆಂಕಟರಮಣ ಸ್ವಾಮೀಯ ಹರಿಸೇವೆ, ಸಂಜೆ ದುರ್ಗಾಪೂಜೆ, ರಾತ್ರಿ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ ಸದಸ್ಯರಿಂದ ಭಜನೆ ನಡೆಯಿತು.

ಬಳಿಕ ಮಂತ್ರದೇವತೆ ಹಾಗೂ ಕೊರಗಜ್ಜ ದೈವದ ನೇಮೋತ್ಸವ ಜರಗಿತು.

ಹೊನ್ನಪ್ಪ ದಾಸ್, ಸುರೇಶ್ ದಾಸ್ ಮತ್ತು ಸಹೋದರರರು, ಸ್ವಾಮಿ ಕೊರಗಜ್ಜ ಭಕ್ತವೃಂದದವರು ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Exit mobile version