Site icon Suddi Belthangady

ಇಂದಬೆಟ್ಟು: ಕರುವಲ್ಲ ಕಲ್ಲಗುಂಡ ದೇವಸ್ಥಾನ, ಬಂಗಾಡಿ ಹಾಡಿ ದೈವ ಕ್ಷೇತ್ರದ ಕಾಣಿಕೆ ಡಬ್ಬಿ ಕಳ್ಳತನ- ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇಂದಬೆಟ್ಟು: ಇಲ್ಲಿಯ ಕರುವಲ್ಲ ಕಲ್ಲಗುಂಡ ದೇವಸ್ಥಾನದ ಪಡಂಬಿಲ ಪೂಪಾಡಿಕಲ್ಲು ಬಳಿ ಹಾಗೂ ಬಂಗಾಡಿ ಹಾಡಿ ದೈವ ಕ್ಷೇತ್ರ ಕುತ್ರಬೆಟ್ಟು ದ್ವಾರದ ಬಳಿ ಇದ್ದ ಕಾಣಿಕೆ ಡಬ್ಬಿಯ ಹಣವನ್ನು ಯಾರೋ ಕಳ್ಳರು ಕದ್ದು ಪರಾರಿಯಾದ ಘಟನೆ ಜ.9 ರಂದು ರಾತ್ರಿ ನಡೆದಿದೆ.

ಕಾಣಿಕೆ ಡಬ್ಬಿಯ ಬೀಗ ಮುರಿದು ಅದರಲ್ಲಿ ಇದ್ದ ಅಂದಾಜು ರೂ.6000 ಹಣವನ್ನು ಕಳವುಗೈದಿರುವ ಬಗ್ಗೆ ಶಂಕಿಸಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯ ನಂತರ ಇನ್ನಷ್ಟು ಮಾಹಿತಿ ತಿಳಿದು ಬರಬೇಕಾಗಿದೆ.

Exit mobile version