Site icon Suddi Belthangady

ಸಾಮೂಹಿಕ ಸತ್ಯದತ್ತ ವೃತ ಪೂಜೆ ಮತ್ತು ಲಾಭಾಂಶ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ: ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ – ಬೆಳ್ತಂಗಡಿ ತಾಲೂಕಿನ ವತಿಯಿಂದ ಸಾಮೂಹಿಕ ಶ್ರೀ ಸತ್ಯದತ್ತ ವೃತ ಪೂಜೆ ಮತ್ತು ವಿಕಾಸವಾಹಿನಿ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮವು ಲಾಯಿಲ ಶ್ರೀ ವಿಶ್ವಕರ್ಮಾಭ್ಯುಧಯ ಸಭಾ ಭವನದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಪ್ರಜ್ವಲಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಟಾಟಿಸಿದರು.ಸಂಸ್ಕಾರ, ಸಹಕಾರ, ಸಂಘಟನೆ ಸಮೃದ್ಧಿಯಿಂದ ಪ್ರತಿ ಮನೆ ಮನೆಯನ್ನು ಬೆಳಗಲು ಸಾಧ್ಯ ನೆಮ್ಮದಿಯ ಜೀವನಕ್ಕೆ ಸಂಸ್ಕಾರವಿದ್ದರೆ ಪ್ರೀತಿಯಿಂದ ಬದುಕಲು ಸಂಘಟನೆ ಒಂದು ಅಡಿಪಾಯವೆಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಾರಾಯಣಗುರು ಕಾಲೇಜು ಕುದ್ರೋಳಿಯ ಉಪನ್ಯಾಸಕ ಕೇಶವ ಬಂಗೇರ, ಶ್ರೀ ವಿಶ್ವಕರ್ಮಭ್ಯುಧಯ ಸಭಾ ಇದರ ಅಧ್ಯಕ್ಷರಾದ ಗಣೇಶ್ ಆಚಾರ್ಯ ಬಾಲ್ಯಾಯಕೋಡಿ, ಒಡಿಯೂರು ಕ್ಷೇತ್ರದಲ್ಲಿ ಪೌರೋಹಿತ್ಯ ಮಾಡುವ ವೇದಮೂರ್ತಿ ಚಂದ್ರಶೇಖರ ಉಪಾಧ್ಯಾಯ, ಮೇಲಂತಬೆಟ್ಟು ಶ್ರೀ ಕ್ಷೇತ್ರ ಭಗವತಿ ದೇವಾಸ್ಥಾನದ ಧರ್ಮದರ್ಶಿಗಳಾದ ಯೋಗಿಶ್ ಪೂಜಾರಿ , ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ನಿರ್ದೇಶಕರಾದ ಕಿರಣ್ ಉರ್ವ ರವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬೆಳ್ತಂಗಡಿ ತಾಲೂಕಿನ ಮೇಲ್ವಿಚಾರಕಾದ ಬಿ.ಯಶೋಧರ ಸಾಲ್ಯಾನ್ ಕುದ್ಯಾಡಿಯವರು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.ವಿಶಾಲರವರು ಕಾರ್ಯಕ್ರಮ ನಿರೂಪಿಸಿ ಸೇವಾಧೀಕ್ಷಿತೆ ಪುಷ್ಪಲತಾ ರವರು ವಂದಿಸಿದರು.

Exit mobile version