Site icon Suddi Belthangady

ಹೆಬ್ಬಾರ್ ಹೆಲ್ದಿ ವೇ ಗ್ರಾಮೀಣ ಮಳಿಗೆ ಕಾಶಿಬೆಟ್ಟುವಿನಲ್ಲಿ ಶುಭಾರಂಭ

ಉಜಿರೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಶಿಬೆಟ್ಟು ಶ್ರೀ ರಾಜರಾಜೇಶ್ವರಿ ಕಾಂಪ್ಲೆಕ್ಸ್ ಲಾಯಿಲ ಬೆಳ್ತಂಗಡಿ ಇಲ್ಲಿ ನೂತನವಾಗಿ ನಿರ್ಮಾಣಗೊಂಡ ಹೆಬ್ಬಾರ್ ಹೆಲ್ದಿ ವೇ ಗ್ರಾಮೀಣ ಮಳಿಗೆ ಜ.08ರಂದು ಅಂಗಡಿಯೂ ಗಣಪತಿ ಹವನ ಮತ್ತು ಲಕ್ಷ್ಮಿ ಪೂಜೆಯೊಂದಿಗೆ ಜ.8ರಂದು ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಸನ್ನ ಕಾಲೇಜ್ ಸಂಸ್ಥೆಯ ಅಧ್ಯಕ್ಷರಾದ ಕೆ.ಗಂಗಾಧರ ಗೌಡ ಮುಖ್ಯ ಅತಿಥಿಗಳಾಗಿ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮುಕ್ತೇಶ್ವರರಾದ ಶರತ್ ಕೃಷ್ಣ ಪಡ್ವೆಟ್ನಾಯ, ಕಟ್ಟಡ ಮಾಲಕರಾದ ಅಣ್ಣಿ ಪೂಜಾರಿ, ಸತೀಶ್ ಮಬೆನ್ ಹಾಗೂ ತಾಯಿ ಭಾರತಿ ಹೆಬ್ಬಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಧ್ಯ ಪ್ರಾರ್ಥಿಸಿ, ಸಂಸ್ಥೆಯ ಮಾಲಕರಾದ ಕಿರಣ್ ಹೆಬ್ಬಾರ್ ಸ್ವಾಗತಿಸಿ, ಪೂರ್ಣಿಮಾ ನಿರೂಪಿಸಿ ವಂದಿಸಿದರು.

Exit mobile version