Site icon Suddi Belthangady

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ.ಶಾಲೆಯಲ್ಲಿ ಬಹುಮಾನ ವಿತರಣಾ ಸಮಾರಂಭ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳ ಇಲ್ಲಿ ಜ.5ರಂದು ವಾರ್ಷಿಕ ಪ್ರತಿಭಾ ದಿನಚಾರಣೆಯ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕಿ ಸತ್ಯವತಿ ಮತ್ತು ಗಿರಿಜರವರು ಭಾಗವಹಿಸಿ ಮಕ್ಕಳನ್ನು ಹರಸಿ ಹಾರೈಸಿದರು.

ಸಾಂಸ್ಕೃತಿಕ ಬಹುಮಾನದ ಪಟ್ಟಿಯನ್ನು ಸೀಮಾ, ಪೂರ್ಣಿಮಾ ವಾಚಿಸಿದರು.ಕ್ರೀಡಾ ಬಹುಮಾನವನ್ನು ಸಂಜೀವ ಕೆ ವಾಚಿದರು.

ಅಧ್ಯಕ್ಷ ಸ್ಥಾನವನ್ನು ಮುಖ್ಯ ಶಿಕ್ಷಕ ಪಿ ಸುಬ್ರಹ್ಮಣ್ಯ ರಾವ್ ಇವರು ಮಕ್ಕಳನ್ನು ಉದ್ದೇಶಿಸಿ ಸ್ಪರ್ಧೆಯಲ್ಲಿ ಸೋಲು ಗೆಲುವು ಎರಡೂ ಇದೆ.ಸೋಲೇ ಗೆಲುವಿನ ಮೆಟ್ಟಿಲು.ಎರಡನ್ನೂ ಸಮಾನವಾಗಿ ಸ್ವೀಕರಿಸಿ ಯಶಸ್ಸನ್ನು ಗಳಿಸಿ ಎಂದು ಹೇಳಿದರು.

ಮಕ್ಕಳಿಂದ ಪ್ರಾರ್ಥನೆ, ಕಾವ್ಯ ರಿಂದ ಧನ್ಯವಾದವಿತ್ತ ಕಾರ್ಯಕ್ರಮವನ್ನು ಕೇಶವತಿ ಧನ್ಯವಾದವಿತ್ತರು.ಎಲ್ಲಾ ಶಿಕ್ಷಕರು ಸಹಕರಿಸಿದರು.

Exit mobile version