Site icon Suddi Belthangady

ನೂತನ ರಸ್ತೆಯ ದುರವಸ್ಥೆ!

ಬೆಳ್ತಂಗಡಿ: ಎಲ್ಲಿಗೆ ಮುಟ್ಟಿತು ನಮ್ಮ ಪರಿಸ್ಥಿತಿ ಎಂಬಂತಾಗಿದೆ ರಸ್ತೆ ಕಾಮಗಾರಿ.

ಜ.3ರಂದು ಬೆಳಗ್ಗಿನಿಂದಲೇ ಮಂಗಳೂರು-ವಿಲ್ಲಂಪುರ ಹೆದ್ದಾರಿಯಲ್ಲಿನ ಮಡಂತ್ಯಾರು-ಮದ್ದಡ್ಕ ರಸ್ತೆಯಲ್ಲಿ ಅಪಘಾತದ ಸರಮಾಲೆ ನಡೆದಿದೆ.ಹೆದ್ದಾರಿ ಕಾಮಗಾರಿಗೆ ಅಲ್ಲಲ್ಲಿ ಚರಂಡಿ ಮಾಡಿ ಮರಣ ಬಾವಿಯಂತೆ ತೋರುತ್ತಿದೆ.ಬೆಳಿಗ್ಗೆಯಿಂದ ದ್ವಿಚಕ್ರ ವಾಹನದೊಂದಿಗೆ ಎಲ್ಲಾ ವಾಹನ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.ರಸ್ತೆಗಳೆಲ್ಲಾ ಕೆಸರುಮಯವಾಗಿದೆ.ಶಾಲಾ ಮಕ್ಕಳ ಪಾಡಂತೂ ಶೋಚನೀಯವಾಗಿದೆ.

ಅಭಿವೃದ್ಧಿ ಕಾರ್ಯಗಳು ನಡೆಯಲೇಬೇಕು.ಅದಕ್ಕೆ ಸಾರ್ವಜನಿಕರು ಸಹಕಾರ ನೀಡಲೇಬೇಕು.ಆದರೆ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ದೂರು ವ್ಯಕ್ತವಾದರೂ ಸ್ಪಂದನ ದೊರಕಿಲ್ಲ.ಇದೀಗ ರಸ್ತೆ ಬದಿಯಲ್ಲಿ ಕಾಂಕ್ರೀಟೀಕರಣಗೊಂಡ ಚರಂಡಿ ವ್ಯವಸ್ಥೆಯ ಬಗ್ಗೆ ಸಮರ್ಪಕವಾದ ಉತ್ತರ ಸಿಗುತ್ತಿಲ್ಲ ಎಂದು ದೂರು ವ್ಯಕ್ತವಾಗಿದೆ.

Exit mobile version