Site icon Suddi Belthangady

ಜ.6: ಬೆಳಾಲು ಅನಂತೋಡಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ

ಬೆಳಾಲು: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಬೆಳಾಲು ವತಿಯಿಂದ ಜ.6ರಂದು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಚಾರ್ಮಾಡಿ ಕುಂಜಿರ ಗುರುಸ್ವಾಮಿಯವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ನಡೆಯಲಿದೆ ಬೆಳಿಗ್ಗೆ ಪಂದಳ ಗುಡಿ ಮುಹೂರ್ತ, ಶ್ರೀ ಅನಂತ ಪದ್ಮನಾಭಾ ದೇವರಿಗೆ ಹಾಲು ಪಾಯಸ, ಶಾಸ್ತಾರ ದೇವರಿಗೆ ಮೂಡಪ್ಪ ಸೇವೆ, ಅಮ್ಮನವರಿಗೆ ಗುಡಾನ್ನ ಪಾಯಸ, ಮಹಾಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಬೆಳಾಲು ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಪಾಲುಕೊಂಬು ಮೆರವಣಿಗೆ ಕುಣಿತ ಭಜನೆಯೊಂದಿಗೆ ಬಳಿಕ ದೀಪರಾಧನೆ, ಗಣಪತಿ ಪೂಜೆ, ಪೀಠ ಪೂಜೆ, ರಾತ್ರಿ ಶ್ರೀ ಅನಂತೇಶ್ವರ ಭಜನಾ ಮಂಡಳಿ, ಶ್ರೀ ಅನಂತಪದ್ಮನಾಭಾ ಮಹಿಳಾ ಕುಣಿತ ಭಜನಾ ತಂಡ, ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ ಮಾಯ ಇವರಿಂದ ಭಜನೆ, ಬಳಿಕ ಮಂಗಳೂರು ಶ್ರೀ ಮಂಗಳದೇವಿ ಯಕ್ಷಗಾನ ಮಂಡಳಿಯಿಂದ ಮಣಿಕಂಠ ಮಹಿಮೆ ಮತ್ತು ಬೆಮ್ಮೆರೆ ಬರವು ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಭಕ್ತ ವೃಂದದ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ, ಪ್ರಧಾನ ಕಾರ್ಯದರ್ಶಿ ಶಶಿಧರ ಆಚಾರ್ಯ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ, ಸಂಚಾಲಕ ಗುರುಸ್ವಾಮಿ ಕೇಶವ ಟೈಲರ್, ಸುಧಾಕರ ಕೊಲ್ಪಾಡಿ, ಸೀತಾರಾಮ ಬಿ.ಎಸ್. ತಿಳಿಸಿದ್ದಾರೆ

Exit mobile version