Site icon Suddi Belthangady

ಶ್ರೀ ರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ರಾಜಸ್ತಾನದಲ್ಲಿ ಗುರುವಂದನೆ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಉತ್ತರ ಭಾರತದ ಪ್ರವಾಸದಲ್ಲಿದ್ದು ಜ.1 ರಂದು ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಟ್ರಸ್ಟಿ ರಾಜಸ್ತಾನದ ಭಗವತಿ ಪ್ರಸಾದ್ ಬಿಹಾನಿಯವರ ನಿವಾಸದಲ್ಲಿ ಗುರುವಂದನೆ ಸ್ವೀಕರಿಸಿದರು.

ರಾಜಸ್ತಾನದ ರಾಜಸ್ ಮಂದ ವಿಧಾನ ಸಭಾ ಕ್ಷೇತ್ರದ ಶಾಸಕಿ ದೀಪ್ತಿ ಕಿರಣ್ ಮಹೇಶ್ವರಿ ಸ್ವಾಮೀಜಿಯರರಿಂದ ಆಶೀರ್ವಾದ ಪಡೆದರು.

ಅಯೋದ್ಯೆಯ ಸ್ವಾಮಿ ಕೇಶವ ದಾಸ್, ಮಠದ ಶಿಷ್ಯ ವರ್ಗದವರು ಉಪಸ್ಥಿತರಿದ್ದರು.

Exit mobile version