Site icon Suddi Belthangady

ಶ್ರೀ ರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪುಷ್ಕರ ಕ್ಷೇತ್ರಕ್ಕೆ ಭೇಟಿ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಡಿ.31 ರಂದು ರಾಜಸ್ತಾನದ ಪುಷ್ಕರಕ್ಕೆ ಭೇಟಿ ನೀಡಿದರು.

ಅಲ್ಲಿಯ ಪರಮ ಪವಿತ್ರ ಪುಷ್ಕರ ತೀರ್ಥದಲ್ಲಿ ಸ್ನಾನ ಮಾಡಿ ಜಗತ್ತಿನ ಏಕೈಕ ಬ್ರಹ್ಮ ಕ್ಷೇತ್ರದ ಬ್ರಹ್ಮ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.

ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಟ್ರಷ್ಟಿ ರಾಜಸ್ತಾನದ ಭಗವತಿ ಪ್ರಸಾದ್ ಬಿಹಾನಿ, ಅಯೋದ್ಯೆಯ ಸ್ವಾಮಿ ಕೇಶವ ದಾಸ್, ಮಠದ ಶಿಷ್ಯ ವರ್ಗದವರು ಸ್ವಾಮೀಜಿಯೊಂದಿಗೆ ಇದ್ದರು.

Exit mobile version