Site icon Suddi Belthangady

ಉಜಿರೆಯಲ್ಲಿ 7th ಹೆವೆನ್ ಕೇಕ್, ಬೇಕರಿ ಪ್ರಾಡಕ್ಟ್ ಉದ್ಘಾಟನೆ

ಉಜಿರೆ: ಇಲ್ಲಿಯ ಶ್ರೀ ಧ.ಮ.ಕಾಲೇಜು ಸಮೀಪ ಸೌರಭ ಆರ್ಕೆಡ್ ನಲ್ಲಿ 7th ಹೆವನ್ ಕೇಕ್, ಬೇಕರಿ, ಉತ್ಪನ್ನಗಳ ಮಳಿಗೆ ಡಿ.29 ರಂದು ಶುಭಾರಂಭಗೊಂಡಿತು.

ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟ್ನಾಯ ಉದ್ಘಾಟಿಸಿ, ಶುಭ ಹಾರೈಸಿದರು.

ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಉಜಿರೆ ದೇವಸ್ಥಾನದ ಅರ್ಚಕ ಶ್ರೀನಿವಾಸ ಹೊಳ್ಳ, ಉಜಿರೆ ಹಳೆಪೇಟೆ ಮೊಯಿದ್ದಿನ್ ಜುಮ್ಮಾ ಮಸೀದಿಯ ಧರ್ಮಗುರು ಹುಸೈನಾರ್, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣಾನ್, ಕಟ್ಟಡದ ಮಾಲಾಕ ವಿಶ್ವಜೀತ್, ಸಂಜೀವ ಶೆಟ್ಟಿ ಮತ್ತು ರೇವತಿ ಟ್ಟಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಮಾಲಕ ರಂಜಿತ್ ಶೆಟ್ಟಿ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ನಾರಾಯಣ ಎಂ.ಎಸ್. ಕಾರ್ಯಕ್ರಮ ನಿರೂಪಿಸಿದರು.

Exit mobile version