Site icon Suddi Belthangady

ಡಿ.30: ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರಕ್ಕೆ ಯುಗಲಮುನಿವರ್ಯರಾದ ಪರಮಪೂಜ್ಯ 108 ಶ್ರೀ ಅಮೋಘಕೀರ್ತಿ ಮುನಿ ಮಹಾರಾಜರು, ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮುನಿ ಮಹಾರಾಜರು ಪುರಪ್ರವೇಶ

ಬೆಳ್ತಂಗಡಿ: ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಜೈನ್ ಪೇಟೆ ಬೆಳ್ತಂಗಡಿ ಇಲ್ಲಿಗೆ ಡಿ.30ರಂದು ಬೆಳಗ್ಗೆ 8 ಗಂಟೆಗೆ ಪರಮಪೂಜ್ಯ ಪ್ರಜ್ಞಾಶ್ರಮಣ ಆಚಾರ್ಯ ಶ್ರೀದೇವನಂದಿ ಗುರುಗಳ ಪರಮ ಶಿಷ್ಯರಾದ
ಯುಗಲಮುನಿವರ್ಯರಾದ ಪರಮಪೂಜ್ಯ 108 ಶ್ರೀ ಅಮೋಘಕೀರ್ತಿ ಮುನಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮುನಿ ಮಹಾರಾಜರು ಭವ್ಯ ಮೆರವಣಿಗೆಯೊಂದಿಗೆ ಪುರಪ್ರವೇಶ ಗ್ಯೆಯಲ್ಲಿದ್ದಾರೆ.

ಮುನಿದ್ವಯರನ್ನು ಬೆಳ್ತಂಗಡಿ ನಗರದಿಂದ ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ವರೆಗೆ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು. ಇವರು ಈ ದಿನ ಮಧ್ಯಾಹ್ನದ ಬಳಿಕ 3:30 ರಿಂದ ಮಂಗಳ ಪ್ರವಚನವನ್ನು ಮಾಡಲಿರುವರು.ಅದೇ ರೀತಿ ಹೊಸ ವರ್ಷದ ಆರಂಭದ ದಿನವಾದ ಜನವರಿ ಒಂದರಂದು ಬೆಳ್ತಂಗಡಿ ಬಸದಿಯಲ್ಲಿ ಮುನಿಗಳ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನ ಅಡಿಯಲ್ಲಿ ವಿಶ್ವಶಾಂತಿಗಾಗಿ ಬೆಳಗ್ಗೆ 7.30 ರಿಂದ ಶ್ರೀ ಶಾಂತಿಚಕ್ರ ಆರಾಧನಾ ವಿಧಾನವು ನಡೆಯಲಿದ್ದು ಇದೇ ದಿನ ಅಪರಾಹ್ನ 1.30 ರಿಂದ 3.30ರವರೆಗೆ ಉಭಯ ಜಿಲ್ಲೆಯ ಸುಪ್ರಸಿದ್ಧ ಜೈನ್ ಸಂಗೀತ ಸಂಸ್ಥಾನ ಮೂಡಬಿದ್ರೆಯ ಸೌಮ್ಯ ಮತ್ತು ಸರ್ವೇಶ್ ಜೈನ್ ಇವರಿಂದ ಜೈನ್ ಸಂಗೀತ ಸುಧೆ ವಿಶೇಷ ಗಾನ ಲಹರಿ ಕಾರ್ಯಕ್ರಮ ನಡೆಯಲಿದೆ.ಅದೇ ರೀತಿ ಅಪರಾಹ್ನ 3.30 ರಿಂದ ಮುನಿದ್ವಯರಿಂದ ದಿವ್ಯ ಮಂಗಲ ಪ್ರವಚನ ನಡೆಯಲಿದೆ ಎಂದು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ ಜಯವರ್ಮರಾಜ್ ಬಳ್ಳಾಲ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Exit mobile version