Site icon Suddi Belthangady

ರಾಯಿ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಇದರ ವಾರ್ಷಿಕ ರ್‍ಯಾಲಿ

ಬಂಟ್ವಾಳ: ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ವಾಮದಪದವು ಇದರ 2023-24 ನೇ ಸಾಲಿನ ವಾರ್ಷಿಕ ರ್‍ಯಾಲಿಯು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ರಾಯಿಯಲ್ಲಿ ನಡೆಯಿತು.

ವಾಮದಪದವು ವಲಯದ ಅಧ್ಯಕ್ಷ ಆನಂದ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ರಾಯಿ ಗ್ರಾಮ‌ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು ಉದ್ಘಾಟಿಸಿ, ಹಾರೈಸಿದರು.

ಮುಖ್ಯ ಅತಿಥಿಗಳಾಗಿ ತಾಲೂಕು ದೈಹಿಕ ಪರಿವೀಕ್ಷಕರು ಹಾಗೂ ಸ್ಕೌಟ್ಸ್ ಗೈಡ್ಸ್ ನ ನೋಡಲ್ ಅಧಿಕಾರಿ ವಿಷ್ಣುಹೆಬ್ಬಾರ್, ರಾಯಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಮೇಶ್ ಗೌಡ ಮಿಯಾಲ್, ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯತೀಶ್ ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ, ಚೆನ್ನೈತ್ತೋಡಿ ಗ್ರಾಮ‌ ಪಂಚಾಯತ್ ಮಾಜಿ ಸದಸ್ಯ ಅನಂತ ಪೈ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ನಾಯಕ್, ಪಿ.ಡಬ್ಲ್ಯು ಡಿ ಕಂಟ್ರಾಕ್ಟರ್ ಅಮ್ಮು ರೈ ಹರ್ಕಾಡಿ, ರಾಯಿ ಶಾಲೆ ಮುಖ್ಯ ಗುರು ಜಾನೆಟ್ ಕೊನ್ಸೆಸೊ, ಪ್ರಜಾವಾಣಿ ಪತ್ರಿಕೆ ವರದಿಗಾರ ಮೋಹನ್ ಕೆ ಶ್ರೀಯಾನ್, ಬರಹಗಾರ ಮತ್ತು ಪತ್ರಕರ್ತರೂ ಆದ ಗೋಪಾಲ್ ಅಂಚನ್, ಸ್ಕೌಟ್ಸ್ ನ‌ ಎ.ಡಿ.ಸಿ ಯಾದ ಶೇಖ್ ರೆಹಮತುಲ್ಲಾ, ಕೋಶಾಧಿಕಾರಿ ನವೀನ್ ಚಂದ್ರ ಶೆಟ್ಟಿ, ಶಿಬಿರ ನಿರ್ದೇಶಕರಾದ ಮೋಹನ್ ಹೆಚ್, ಕಾರ್ಯದರ್ಶಿ ಸುಕೇಶ್ ಕೆ, ಜತೆ ಕಾರ್ಯದರ್ಶಿ ಬೇಬಿ ಇವರುಗಳು ಹಾಜರಿದ್ದರು.

ಶಿಕ್ಷಕಿ ಬೇಬಿ ಕಾರ್ಯಕ್ರಮ ನಿರೂಪಿಸಿ, ಸುಕೇಶ್ ಕೆ.ಸ್ವಾಗತಿಸಿ, ಬುರೂಜ್ ಹೈಸ್ಕೂಲ್ ಮುಖ್ಯ ಶಿಕ್ಷಕಿ ವಿಮಲಾ ಧನ್ಯವಾದವಿತ್ತರು.

Exit mobile version