Site icon Suddi Belthangady

ಶ್ರೀ ಧ.ಮಂ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ.ಪೂ ವಿದ್ಯಾರ್ಥಿಗಳಿಗಾಗಿ ಎಕ್ಸ್ ಪೀರಿಯಾ-2k23 ರಾಜ್ಯ ಮಟ್ಟದ ವಿಜ್ಞಾನಮೇಳ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಎರಡು ದಿನದ ರಾಜ್ಯ ಮಟ್ಟದ ವಿಜ್ಞಾನಮೇಳ ಎಕ್ಸ್ ಪೀರಿಯಾ-2k23 ಡಿ.29, 30ರಂದು ಆಯೋಜಿಸಲಾಗಿದೆ. N.I.T.K ಸುರತ್ಕಲ್‌ನ ದ.ಕ. ನಿರ್ಮಿತಿ ಕೇಂದ್ರ ಕಾರ್ಯ ನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ರವರು ವಿಜ್ಞಾನಮೇಳ ಉದ್ಘಾಟನೆ ಮಾಡಲಿದ್ದಾರೆ.ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಸತೀಶ್ಚಂದ್ರ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ವಹಿಸಲಿರುವರು.

ಈ ವಿಜ್ಞಾನಮೇಳದಲ್ಲಿ ರಸಪ್ರಶ್ನೆ, ಗಣಿತ ಒಗಟು, ಹ್ಯಾಕಥಾನ್, ವಿಜ್ಞಾನ ಮಾದರಿ ತಯಾರಿ, ಟ್ರೆಶರ್ ಹಂಟ್ ಮುಂತಾದ ಸ್ಪರ್ಧೆಗಳ ಜತೆಗೆ ವ್ಯಕ್ತಿತ್ವ ವಿಕಸನ ತರಬೇತಿಯೂ ನಡೆಯಲಿರುವುದು.
ದೂರದ ಊರಿನ ವಿದ್ಯಾರ್ಥಿಗಳಿಗಾಗಿ ಊಟ-ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕರುನಾಡು ಕಂಡ ದಾರ್ಶನಿಕರ ಗತವೈಭವ ಎಂಬ ಹೊನಲು ಬೆಳಕಿನ ದೃಶ್ಯರೂಪಕವನ್ನು ಪ್ರದರ್ಶಿಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಡಾ. ರವೀಶ್‌ಪಡುಮಲೆ 9008072628, ಪ್ರೋ ಪ್ರತಾಪ್‌ಚಂದ್ರ 9964025500 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Exit mobile version