Site icon Suddi Belthangady

ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮುಗುಳಿ ನಾರಾಯಣ ರಾವ್, ಉಪಾಧ್ಯಕ್ಷರಾಗಿ ವಡಿವೇಲು

ಗುರುವಾಯನಕೆರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆಮುಂದಿನ ಅವಧಿಗೆ ಡಿ. 26ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮುಗುಳಿ ನಾರಾಯಣ ರಾವ್, ಉಪಾಧ್ಯಕ್ಷರಾಗಿ ವಡಿವೇಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಮೋಹನ ನಾಯ್ಕ, ಅರುಣ್ ಕುಮಾರ್, ಪುರಂದರ ಶೆಟ್ಟಿ, ಜಯಂತಿ, ಶಶಿರಾಜ್ ಶೆಟ್ಟಿ, ಸುಜಿತಾ ವಿ.ಬಂಗೇರ, ಭಗೀರಥ ಜಿ., ಸಚಿನ್ ಕುಮಾರ್, ನಾರಾಯಣ ಪೂಜಾರಿ, ಅನಂತರಾಜ್ ಜೈನ್, ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಬೆಳ್ತಂಗಡಿ ತಾಲೂಕ್ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ., ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿಕಲಾ ಮತ್ತು ಸಿಬಂದಿ ವರ್ಗದವರು ಸಹಕರಿಸಿದರು.

Exit mobile version