Site icon Suddi Belthangady

ಚಾರ್ಮಾಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ, ಶ್ರೀ ರಾಮ್ ಚಾರ್ಮಾಡಿ ಇದರ ಸಹಭಾಗಿತ್ವದಲ್ಲಿ ಹೊನಲು ಬೆಳಕಿನ ಹಿಂದೂ ಬಾಂಧವರ ತಾಲೂಕು‌ ಮಟ್ಟದ ವಾಲಿಬಾಲ್ ಪಂದ್ಯಾಟ

ಚಾರ್ಮಾಡಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಚಾರ್ಮಾಡಿ ಘಟಕ ಶ್ರೀರಾಮ್ ಚಾರ್ಮಾಡಿ ಇದರ ಸಹಭಾಗಿತ್ವದಲ್ಲಿ ಚಾರ್ಮಾಡಿ ತೋಟತ್ತಾಡಿ ಜಿಬಿದ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ಬಾಂಧವರಿಗೆ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಡಿ.24 ರಂದು ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ಅಂಕಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಹೆಚ್ .ಪಿ ಪುತ್ತೂರು ಕಾರ್ಯದರ್ಶಿ ನವೀನ್ ನೆರಿಯ ವಹಿಸಿದ್ದರು.

ದಿಕ್ಸೂಚಿ ಭಾಷಣವನ್ನು ಜಿಲ್ಲಾ ಸಂಚಾಲಕರು, ಪುತ್ತೂರು ಭರತ್ ಕುಮ್ಡೇಲು ನೆರವೇರಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಗಣೇಶ್ ಕಳೆಂಜ ಜಿಲ್ಲಾ ಅಖಾಡ ಪ್ರಮುಖ್‌ ಪುತ್ತೂರು, ದಿನೇಶ್ ಚಾರ್ಮಾಡಿ ಅಧ್ಯಕ್ಷರು ವಿ.ಹೆಚ್.ಪಿ.ಬಜರಂಗದಳ ಬೆಳ್ತಂಗಡಿ ಪ್ರಖಂಡ, ನಾಗೇಶ್ ಕಲ್ಮಂಜ ಪ್ರಸಾರ/ಪ್ರಚಾರ ಪ್ರಮುಖ್ ವಿ.ಹೆಚ್.ಪಿ ಬಜರಂಗದಳ ಬೆಳ್ತಂಗಡಿ ಪ್ರಖಂಡ, ಎ.ಬಾಲಕೃಷ್ಣ ಅಡಿಮಾರು ಅಧ್ಯಕ್ಷರು ವಿ.ಹೆಚ್.ಪಿ ಚಾರ್ಮಾಡಿ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘಟನೆಯ ಕಾರ್ಯಕರ್ತರು‌ ಹಾಗೂ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು.

Exit mobile version