Site icon Suddi Belthangady

ಧರ್ಮಸ್ಥಳ: ಪುನಶ್ಚೇತನಾ ಕಾರ್ಯಾಗಾರದ ಸಮಾರೋಪ ಸಮಾರಂಭ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ‌ ನಿರ್ದೇಶಕರು, ನಿರ್ದೇಶಕರು, ಯೋಜನಾಧಿಕಾರಿಗಳಿಗೆ ಮೂರು ದಿನಗಳ ಕಾಲ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ‘ಪುನಶ್ಚೇತನಾ ಕಾರ್ಯಾಗಾರ’ ದ ಸಮಾರೋಪ ಸಮಾರಂಭದಲ್ಲಿ ವೀರೇಂದ್ರ ಹೆಗ್ಗಡೆ ದಂಪತಿಗಳು ಯೋಜನೆಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್ ಮಂಜುನಾಥ್, ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಹಣಕಾಸು ವಿಭಾಗದ ಪ್ರಾದೇಶಿಕ ನಿರ್ದೇಶಕ ಶಾಂತರಾಮ್ ಪೈ, ಪ್ರಾದೇಶಿಕ ನಿರ್ದೇಶಕರುಗಳಾದ ವಿವೇಕ್ ವಿ.ಪಾಯಸ್, ಜಯಶಂಕರ ಶರ್ಮ, ಮನೋಜ್ ಮಿನೆಜಸ್, ಜಯರಾಮ್, ಜಯರಾಮ ನೆಲ್ಲಿತ್ತಾಯ, ಗಣೇಶ್ ಬಿ., ಆನಂದ ಸುವರ್ಣ, ಅಬ್ರಹಾಂ ಎಂ.ಕೆ., ಶೀನಪ್ಪ ಎಂ., ವಸಂತ ಸಾಲ್ಯಾನ್, ದುಗ್ಗೇ ಗೌಡ, ಪುರುಷೋತ್ತಮ ಪಿ.ಕೆ., ಗೀತಾ ಮುಂತಾದವರು ಉಪಸ್ಥಿತರಿದ್ದರು.

Exit mobile version