Site icon Suddi Belthangady

ಬಾರ್ಯ: ವಿಪತ್ತು ನಿರ್ವಹಣೆಯ ಸ್ವಯಂ ಸೇವಕರಿಂದ ಸೇವಾಕಾರ್ಯ

ಬಾರ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಣ್ಣೀರುಪಂತ ವಲಯದ ಶೌರ್ಯ ವಿಪತ್ತು ನಿರ್ವಹಣೆ ಘಟಕದಿಂದ ದ.ಕ.ಜಿ.ಪಂ.ಸ.ಉ.ಹಿ.ಪ್ರಾಥಮಿಕ ಶಾಲೆ ಪೆರಿಯೊಟ್ಟು ಬಾರ್ಯದ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಸ್ವಚ್ಛತಾ ಸೇವಾಕಾರ್ಯ ಡಿ.20 ರಂದು ನಡೆಯಿತು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವೆಂಕಟೇಶ್ ಸುಣ್ಣಾಜೆ, ಜನಜಾಗೃತಿ ಕಾರ್ಯಕಾರಿಣಿ ಸಮಿತಿಯ ಸದಸ್ಯ ಗುಣಕರ ಅಗ್ನಾಡಿ, ಶಾಲಾ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ, ತಣ್ಣೀರುಪಂತ ವಲಯ ಮೇಲ್ವಿಚಾರಕಿ ವಿದ್ಯಾ ನಂದಕುಮಾರ್, ಸೇವಾಪ್ರತಿನಿಧಿ ವಿಶಾಲಾಕ್ಷಿ, ವಿಪತ್ತು ನಿರ್ವಹಣೆಯ ಘಟಕ ಪ್ರತಿನಿಧಿ ಶಿವರಾಮ್, ಒಕ್ಕೂಟದ ಅಧ್ಯಕ್ಷ ರಮೇಶ್ ಉಪಸ್ಥಿತರಿದ್ದರು.

Exit mobile version