Site icon Suddi Belthangady

ತಣ್ಣೀರುಪಂತ ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನೂತನ ಕಟ್ಟಡದ ಉದ್ಘಾಟನೆ

ತಣ್ಣೀರುಪಂತ: ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿ.ನೂತನ ಕಟ್ಟಡವನ್ನು ಸಹಕಾರಿ ರತ್ನ ಬಿ.ನಿರಂಜನ್ ಬಾವಂತ ಬೆಟ್ಟು ಉದ್ಘಾಟಿಸಿದರು.

ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿ.ಕಲ್ಲೇರಿಯ ನೂತನ ಕಟ್ಟಡವನ್ನು ಡಿ.19 ರಂದು ಸಹಕಾರಿ ರತ್ನ ನಿರಂಜನ್ ಕುಮಾರ್ ಬಾವಂತ ಬೆಟ್ಟು ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಪನಿಯ ಅಧ್ಯಕ್ಷ ಲಿಂಗಪ್ಪ ನಾಯ್ಕ ವಹಿಸಿದ್ದರು.ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್, ಉಪ ಕೃಷಿ ನಿರ್ದೇಶಕ ಶಿವಶಂಕರ್, ಕೃಷಿ ಇಲಾಖೆಯ ಚಿದಾನಂದ ಊಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಪುರಂದರ ಗೌಡ , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ನಾರಾಯಣ ಶೆಟ್ಟಿ , ಪ್ರಮುಖರಾದ ಜಯವಿಕ್ರಮ್ ಕಲ್ಲಾಪು, ಸದಾನಂದ ಶೆಟ್ಟಿ ಮಡಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

Exit mobile version