Site icon Suddi Belthangady

ಜೈ ಕರ್ನಾಟಕ ಗಾಯಕರ ಬಳಗದ ದ.ಕ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಜೈ ಕರ್ನಾಟಕ ಗಾಯಕರ ಬಳಗದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ದಕ್ಷಿಣ ಕನ್ನಡ ಜಿಲ್ಲೆಯ ವಾಯ್ಸ್ ಆಫ್ ಬಂಗಾಡಿ ಕಚೇರಿಯಲ್ಲಿ ಜೈ ಕರ್ನಾಟಕ ಗಾಯಕರ ಬಳಗ ಸಂಸ್ಥಾಪಕ ಅಧ್ಯಕ್ಷ ಹೆಚ್.ಎ ಶ್ರೀನಿವಾಸ್ ಮೂರ್ತಿ ಸಮ್ಮುಖದಲ್ಲಿ ನಡೆಯಿತು.

ಪದಾಧಿಕಾರಿಗಳ ಆಯ್ಕೆಗೂ ಮುನ್ನ ಜೈ ಕರ್ನಾಟಕ ಗಾಯಕರ ಬಳಗ ಸಂಸ್ಥಾಪಕ ಅಧ್ಯಕ್ಷ ಹೆಚ್.ಎ ಶ್ರೀನಿವಾಸ್ ಮೂರ್ತಿ ಮತ್ತು ರಾಜ್ಯ ಉಪಾಧ್ಯಕ್ಷರಾದ ಶ್ರೀ ಶಾಂತಾರಾಜ್ ಅವರಿಗೆ ಜಿಲ್ಲಾ ಕಲಾವಿದರಿಂದ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮವು ಮುಂದುವರಿಯುತ್ತಾ ಸಂಸ್ಥೆಯ ಬಗ್ಗೆ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ಉಪಾಧ್ಯಕ್ಷರು ಗಾಯಕರಿಗೆ ಮಾಹಿತಿ ನೀಡಿದರು.ನಂತರ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಜೈ ಕರ್ನಾಟಕ ಗಾಯಕರ ಬಳಗದ ದಕ್ಷಿಣ ಕನ್ನಡ ಜಿಲ್ಲಾ ಗೌರವ ಅದ್ಯಕ್ಷರಾಗಿ ಮನೋಹರ ಪ್ರಸಾದ್, ಜಿಲ್ಲಾ ಅಧ್ಯಕ್ಷರಾಗಿ ಇಸ್ಮಾಯಿಲ್ ಬಂಗಾಡಿ, ಉಪಾಧ್ಯಕ್ಷರಾಗಿ ನವೀನಾಂಜಲಿ ಪುತ್ತೂರು, ಪ್ರದಾನ ಕಾರ್ಯದರ್ಶಿಯಾಗಿ ರವಿ ನೇತ್ರಾವತಿ ನಗರ, ಉಪ ಕಾರ್ಯದರ್ಶಿಯಾಗಿ ಅಶ್ವೀರ್ ಸೋಮಂತಡ್ಕ, ಕೋಶಾಧಿಕಾರಿಯಾಗಿ ನವೀನ್ ಕುಮಾರ್ ಬಂಗಾಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶಾಹೀನ್ ಅತ್ತಾಜೆ, ಜಿಲ್ಲೆಯ ಮಹಿಳಾ ಘಟಕ ಅಧ್ಯಕ್ಷೆಯಾಗಿ ಕವಿತಾ.ಡಿ.ಪುತ್ತೂರು ಆಯ್ಕೆಯಾದರು.

Exit mobile version