Site icon Suddi Belthangady

ಕೊಕ್ಕಡ: ಉಪ್ಪಾರಪಳಿಕೆ ಶಾಲಾ ವಾರ್ಷಿಕೋತ್ಸವ, ನೂತನ ಕೊಠಡಿಗಳ ಉದ್ಘಾಟನೆ

ಕೊಕ್ಕಡ: ಡಿ.9ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಉಪ್ಪಾರಪಳಿಕೆ ಇದರ ವಾರ್ಷಿಕೋತ್ಸವ ಮತ್ತು ನೂತನ ಕೊಠಡಿಗಳ ಉದ್ಘಾಟನೆ ಸಮಾರಂಭವು ನಡೆಯಿತು.

ಶ್ರೀ ಸುಬ್ರಹ್ಮಣ್ಯ ಉಪಾರ್ಣ ಉಪ್ಪಾರು ಇವರಿಂದ ಪೂರ್ವಾಹ್ನ 9:30 ಕ್ಕೆ ಧ್ವಜಾರೋಹಣ ಬಳಿಕ ಲಘುಪಹಾರ ವಿತರಣೆ ಛದ್ಮವೇಶ ಸ್ಪರ್ಧೆಗಳು ನಡೆದವು.ಸಾಯಂಕಾಲ ಗಂಟೆ ಏಳರಿಂದ ಸಭಾ ಕಾರ್ಯಕ್ರಮವು ಗ್ರಾಮ ಪಂಚಾಯತ್ ನ ಅಧ್ಯಕ್ಷ ಬೇಬಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.ಶಾಲಾ ವಿದ್ಯಾರ್ಥಿನಿಯರಾದ ಜ್ಯೋತಿ, ಲಿಖಿತ, ಗಣ್ಯಶ್ರೀ ಮತ್ತು ಆಯಿಷತ್ ಸಹಲಾ ಇವರಿಂದ ಪ್ರಾರ್ಥನೆ ಬಳಿಕ ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಆಲಂಬಿಲ ಇವರು ಸ್ವಾಗತಿಸಿದರು.

ಶಾಲಾ ಮುಖ್ಯೋಪಾಧ್ಯಾಯನಿ ಸರಸ್ವತಿ ಶಾಲೆಯ ವರದಿಯನ್ನು ವಾಚಿಸಿದರು.ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕ್ರೀಡಾಕೂಟದಂದು ನಡೆಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ನೂತನವಾಗಿ ನಿರ್ಮಿಸಲಾದ ವಿವೇಕ ಕೊಠಡಿಗಳನ್ನು ಶಾಸಕ ಹರೀಶ್ ಪೂಂಜ ರವರು ಉದ್ಘಾಟಿಸಿ ಶಾಲೆಯ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಯತ್ನಿಸುವೆನೆಂದು ಭರವಸೆ ಇತ್ತರು.ಪ್ರಧಾನ ಭಾಷಣಕಾರರಾದ ತ್ಯಾಂಪಣ್ಣ ಶೆಟ್ಟಿಗಾರ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಧಿಕಾರಿಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವರು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಇತರೆ ಎಲ್ಲಾ ಸೌಲಭ್ಯಗಳಿಗಿಂತಲೂ ಅಗತ್ಯಕ್ಕೆ ತಕ್ಕಷ್ಟು ಶಿಕ್ಷಕರನ್ನು ಒದಗಿಸುವುದೇ ಅತ್ಯವಶ್ಯವಾದುದು.ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನುಡಿದರು.

ಶಾಲಾ ಸಹ ಶಿಕ್ಷಕಿ ವನಿತಾ ಎಂ.ಬಿ ಇವರು ವಂದನಾರ್ಪಣೆಗೈದರು.ಸಹ ಶಿಕ್ಷಕ ದಾಮೋದರ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು.ಮುಂದಕ್ಕೆ ಸಹ ಶಿಕ್ಷಕಿ ಕ್ರಿಸ್ತಿನ್ ಮಾರ್ಟಿಸ್ ಇವರ ನಿರೂಪಣೆಯೊಂದಿಗೆ ಅಂಗನವಾಡಿ ಶಿಕ್ಷಕಿ ಹರಿಣಾಕ್ಷಿ, ಶಾಲಾ ಜ್ಞಾನದೀಪ ಶಿಕ್ಷಕಿ ವನಿತಾ, ಗೌರವ ಶಿಕ್ಷಕಿ ಕುಮಾರಿ ರಶ್ಮಿತಾ ಕೊಕ್ಕಡ ಇವರ ಸಾರಥ್ಯದಲ್ಲಿ ಅಂಗನವಾಡಿ ಪುಟಾಣಿಗಳಿಂದ ಮತ್ತು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂತು.

ಅಭಿನಯ ಕಲಾವಿದರು, ಕುಡ್ತಾ ಮುಗೇರು ವಿಟ್ಲ ಇವರಿಂದ ಈ ತೆರಿನಗ ಎನ್ನುವ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ ಗೌಡ ಹಳ್ಳಿoಗೇರಿ, ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಕೆಂಪಕೋಡಿ, ಪ್ರಮೀಳಾ ಗಣೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಜಯಪ್ರಕಾಶ್ ಬಾಲ್ತಿಲ್ಲಾಯ, ಉಪಾಧ್ಯಕ್ಷೆ ಕಾವ್ಯ ಕೊಡಿಂಗೇರಿ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ರಮೇಶ್ ಗೌಡ ಕುಡಾಲ, ಉಪಾಧ್ಯಕ್ಷೆ ಮೋಹಿನಿ ಕುಡಲ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಾಥ್ ಬಡೆ ಕೈಲೂ, ಉಪಾಧ್ಯಕ್ಷ ಚಂದ್ರ ಕೊಲ್ಲಾಜೇಪಳಿಕೆ, ತೋಟ ಸಮಿತಿ ಅಧ್ಯಕ್ಷ ಯಶೋಧರ ಗೌಡ ಆಲಂಬಿಲಾ ಮತ್ತು ಮಾತೆಯರ ಸಮಿತಿ ಅಧ್ಯಕ್ಷೆ ಸಾವಿತ್ರಿ ಬಡಕೈಲು, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Exit mobile version