Site icon Suddi Belthangady

ಕೊಕ್ಕಡ: ನಿವೃತ್ತ ಮುಖ್ಯಶಿಕ್ಷಕ ಶಿವರಾಮ ತೋಡ್ತಿಲ್ಲಾಯರ ಕೃಷಿ ತೋಟದಲ್ಲಿ ಬಾಳೆ ಗಿಡದ ಮಧ್ಯ ಭಾಗದಲ್ಲಿ ಬಿಟ್ಟ ಗೊನೆ

ಕೊಕ್ಕಡ ಗ್ರಾಮದ ಬಡೆಕ್ಕರ ಸಮೀಪದ ಶ್ರೀ ಭ್ರಾಮರೀ ನಿಲಯದ ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ತೋಡ್ತಿಲ್ಲಾಯರ ಕೃಷಿ ತೋಟದಲ್ಲಿ ಬಾಳೆ ಗಿಡದ ಮಧ್ಯ ಭಾಗ ಒಡೆದು ಗೊನೆ ಹಾಕಿದೆ.

ಬಾಳೆ ಗಿಡದ ತುದಿಯಲ್ಲಿ ಗೊನೆ ಹಾಕುವುದು ಸಹಜವಾಗಿದ್ದು, ಬಾಳೆ ಗಿಡದ ಮಧ್ಯದಲ್ಲಿಯೇ ಸಿಡಿದು ಗೊನೆಯ ಕೆಳಮುಖವಾಗಿರದೆ ಮೇಲ್ಮುಖವಾಗಿ ಬೆಳೆದು ಬಂದಿದೆ.

ಪ್ರಕೃತಿಯಲ್ಲಿ ನಡೆಯುವ ವಿಸ್ಮಯಗಳಿಗೆ ಇದು ಕೂಡ ಸಾಕ್ಷಿ ಎಂಬಂತೆ ಮೂಡಿದೆ.

Exit mobile version