Site icon Suddi Belthangady

ಜಮೀನಿಗೆ ಅಕ್ರಮ ಪ್ರವೇಶ, ಭೂ ಸ್ವಾಧೀನಪಡಿಸಲು ಯತ್ನ, ಜೀವ ಬೆದರಿಕೆ

ಬೆಳ್ತಂಗಡಿ: ಜಮೀನಿಗೆ ಮೂವರು ಅಕ್ರಮ ಪ್ರವೇಶ ಮಾಡಿ ಭೂಮಿ ಸ್ವಾಧೀನಪಡಿಸಲು ಯತ್ನಿಸಿದ್ದಲ್ಲದೆ ಅವಾಚ್ಯ ಶಬ್ಧಗಳಿಂದ ಬೈದು, ಜೀವಬೆದರಿಕೆ ಒಡ್ಡಿರುವುದಾಗಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕರುಣಾಕರ ಶೆಟ್ಟಿ ಅವರ ಬಂಟ್ವಾಳ ತಾಲೂಕು ಕೊಡಂಬೆಟ್ಟು ಗ್ರಾಮದ ಕಕ್ಕಿಬೆಟ್ಟು ಎಂಬಲ್ಲಿರುವ ಜಮೀನಿಗೆ ಆರೋಪಿಗಳಾದ ಸಿಪ್ರಿಯನ್ ಕೊಡ್ಡರೋ, ಲೂಯಿಸ್ ಕೊಡೆರೋ ಹಾಗೂ ಮೈಕಲ್ ಕೊಡ್ಡರೋ ಎಂಬವರು ಅಕ್ರಮ ಪ್ರವೇಶ ಮಾಡಿ ಭೂಮಿಯನ್ನು ಸ್ವಾಧೀನಪಡಿಸಲು ಪ್ರಯತ್ನಿಸಿದ್ದಾರೆ.ಈ ವೇಳೆ ಕರುಣಾಕರ ಶೆಟ್ಟಿ ಆಕ್ಷೇಪಿಸಿದ್ದು, ಈ ಸಂದರ್ಭ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಲು ಬಂದಿರುವುದಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಯೇ ಸಿದ್ದ ಹಾಗೂ ಈ ಬಗ್ಗೆ ಆಕ್ಷೇಪಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನೀಡಿದ ದೂರಿನಂತೆ ನ್ಯಾಯಾಲಯದ ಅನುಮತಿಯಂತೆ ಡಿ.೬ಋಮದು ಪೂಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ: 106/2023 ಕಲ೦ 504, 506 ಜೊತೆಗೆ 34 ಭಾದಂಸಂ ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version