Site icon Suddi Belthangady

ವೇಣೂರು: ಲಕ್ಷದೀಪೋತ್ಸವ ಪಾದಯಾತ್ರೆಯ ಪೂರ್ವಭಾವಿ ಸಭೆ

ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ನಡೆಯುವ ಪಾದಯಾತ್ರೆಯ ಪೂರ್ವಭಾವಿ ಸಭೆ ವೇಣೂರು ವಲಯ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಜನಜಾಗೃತಿ ವೇದಿಕೆಯ ಅಧ್ಯಕ್ಷ ಮೋಹನ್ ಅಂಡಿಂಜೆ ಮಾತನಾಡಿ ಮಂಜುನಾಥ ದೇವರನ್ನು ಭಜಿಸಿ ಹೋಗುವಂತಹ ಪಾದಯಾತ್ರೆಗೆ ನಾವೆಲ್ಲರೂ ಭಕ್ತಿಯಿಂದ ಹೋಗಬೇಕು ಎಂದರು. ಯೋಜನಾಧಿಕಾರಿ ದಯಾನಂದ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಭಕ್ತಿಯಿಂದ ಎಲ್ಲ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದರು. ವೇಣೂರು ವಲಯದ ಜನಜಾಗೃತಿ ವೇದಿಕೆಯ ತಾಲೂಕಿನ ಕೋಶಾಧಿಕಾರಿ ಗಿರೀಶ್ ಕೆ ಎಸ್,ಜೈನ ದಿಗಂಬರ ಮಾಜಿ ಕಾರ್ಯದರ್ಶಿ ವಿಜಯ ರಾಜ ಅಧಿಕಾರಿ,ವೇಣೂರು ದೇವಸ್ಥಾನದ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ, ಉದ್ಯಮಿ ಭಾಸ್ಕರ್ ಪೈ , ವಲಯ ಅಧ್ಯಕ್ಷ ಜಯಶಂಕರ ಹೆಗ್ಡೆ , ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಅಶೋಕ್ ಕಜಿಪಟ್ಟ, ನವಜೀವನ ಸಮಿತಿಯ ಸದಸ್ಯ ಶ್ರೀಧರ ಹೆಗ್ಡೆ , ಬಜಿರೆ ಭಜನಾ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್,ತಾಲೂಕು ಜನಜಾಗೃತಿಯ ಸದಸ್ಯ ರಾಮದಾಸ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ವಲಯದ ಒಕ್ಕೂಟದ ಅಧ್ಯಕ್ಷರು , ಪದಾಧಿಕಾರಿಗಳು, ವಿಪತ್ತು ನಿರ್ವಹಣಾ ಸ್ವಯಂ ಸೇವಕರು, ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಶಾಲಿನಿ ಸ್ವಾಗತಿಸಿ ನಿರೂಪಿಸಿದರು.ನಾರಾಯಣ ಅಂಡಿಂಜೆ ವಂದಿಸಿದರು.

Exit mobile version