Site icon Suddi Belthangady

ಪ್ರಾಮಾಣಿಕತೆ ಮೆರೆದ ಗೃಹರಕ್ಷಕದಳ ಸಿಬ್ಬಂದಿ ಸುರೇಶ್ ಶೆಟ್ಟಿ

ಬೆಳ್ತಂಗಡಿ: ಬೆಳ್ತಂಗಡಿ ಬಸ್‌ನಿಲ್ದಾಣದ ಟೂರಿಸ್ಟ್ ಕಾರು ನಿಲ್ದಾಣದ ಬಳಿ ಮಂಡತ್ಯಾರು ನಿವಾಸಿ ಪ್ರಿಯಾ ಅವರು ಕಳೆದುಕೊಂಡಿದ್ದ ಮೊಬೈಲ್ ಫೋನ್ ಅನ್ನು ಬೆಳ್ತಂಗಡಿ ಗೃಹರಕ್ಷಕ ದಳದ ಸಿಬ್ಬಂದಿ ಸುರೇಶ್ ಶೆಟ್ಟಿ(ಮೆಟಲ್ ನಂಬ್ರ ೫೯೧) ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಬೆಳ್ತಂಗಡಿ ಸುದ್ದಿ ಬಿಡುಗಡೆ ಕಚೇರಿಯಲ್ಲಿ ಪ್ರಿಯಾ ಅವರಿಗೆ ಸುರೇಶ್ ಶೆಟ್ಟಿ ಅವರು ಫೋನ್ ಮೊಬೈಲ್ ಹಸ್ತಾಂತರಿಸಿದರು.

Exit mobile version