Site icon Suddi Belthangady

ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಇಲ್ಲಿ ಡಿ.10ರಂದು ನಡೆಯಲಿರುವ ಕಾರ್ತಿಕ ದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ಇಂದು (ನ.25) ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಶ್ರೀಧರ ರಾವ್, ಗ್ರಾಮದ ಪುರೋಹಿತರಾದ ಸತೀಶ್ ಭೀಡೆ, ಹತ್ಯಡ್ಕದ ನವೀನ್ ಭಟ್, ಕ್ಷೇತ್ರದ ಭಕ್ತರಾದ ಬಾಲಣ್ಣ ಗೌಡ ಬದಿಮಾರು, ಸಂತೋಷ್ ಗೌಡ ನಾಯರ್ಮಾರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕು.ಸುಪ್ರೀತಾ ಧರ್ಮಸ್ಥಳ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮವೂ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Exit mobile version