Site icon Suddi Belthangady

ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಗೆ ಯುವವಾಹಿನಿ ಘಟಕದಿಂದ ಸಹಾಯ ಹಸ್ತ

ವೇಣೂರು: ಬಜಿರೆ ಗ್ರಾಮದ ಕುರ್ಲೆಕುಲೆಂಜಿ ನಿವಾಸಿ ಯೋಗೀಶ್ ರವರ ಪತ್ನಿ ಮಾಲತಿಯವರು ನರ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಯುವವಾಹಿನಿ ವೇಣೂರು ಘಟಕದ ವತಿಯಿಂದ ಮಂಚವನ್ನು ಕೊಡುಗೆಯಾಗಿ ನೀಡಲಾಯಿತು.

ಇವರಿಗೆ ವಾಟರ್ ಬೆಡ್ ನ್ನು ಮಾಜಿ ಮಹಿಳಾ ನಿರ್ದೇಶಕಿ ವಿಶಾಲಾಕ್ಷಿ ಶೇಖರ ಪೂಜಾರಿ ಪರದ್ಯಾರು ಅವರು ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಘಟಕದ ಸ್ಥಾಪಕಧ್ಯಕ್ಷ ನಿತೀಶ್ ಎಚ್., ಮಾಜಿ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ, ಕಾರ್ಯದರ್ಶಿ ಸುಜಿತ್ ಬಜಿರೆ, ರಕ್ಷಿತ್ ಬಜಿರೆ, ನಿರಂಜನ್ ಕೆ.ಎಸ್, ಸತೀಶ್ ಕಜಿಪಟ್ಟ, ಶೇಖರ್ ಪೂಜಾರಿ ಪರದ್ಯಾರು ಹಾಗೂ ವಿಮಲ ಉಪಸ್ಥಿತರಿದ್ದರು.

Exit mobile version