Site icon Suddi Belthangady

ಜಾಗದ ತಕರಾರು, ಹಲ್ಲೆ-ಕೇಸು ದಾಖಲು

ಬೆಳ್ತಂಗಡಿ: ಜಾಗದ ತಕರಾರಿಗೆ ಸಂಬಂಧಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಮಲವಂತಿಗೆ ಗ್ರಾಮದ ಚಿನ್ನೇಗೌಡ (೬೪ವ) ಎಂಬವರ ದೂರಿನಂತೆ ಮಹೇಶ್ ಎಂಬಾತನ ವಿರುದ್ಧ ಕೇಸು ದಾಖಲಾಗಿದೆ. ಚಿನ್ನೇಗೌಡ ಮತ್ತು ಮಹೇಶ್ ನಡುವೆ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ತಕರಾರಿದ್ದು ನ.೧೮ರಂದು ಬೆಳಿಗ್ಗೆ ಚಿನ್ನೇಗೌಡರವರು ಮಲವಂತಿಗೆ ಗ್ರಾಮದ ನಿಡ್ಲೇರಿ ಎಂಬಲ್ಲಿದ್ದಾಗ ಚಿನ್ನೇಗೌಡರವರ ಅಣ್ಣನ ಮಗನಾದ ಮಹೇಶ್ ಎಂಬವನು ಜೀಪಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಹತ್ತಿರದಲ್ಲಿದ್ದ ಕೋಲಿನಿಂದ ಚಿನ್ನೇಗೌಡರವರ ಬೆನ್ನಿಗೆ, ತೊಡೆ, ಕಾಲು, ಕೈಗಳಿಗೆ ತಲೆಗೆ ಹೊಡೆದುದಲ್ಲದೆ ಕೈಯಿಂದ ಕೆನ್ನೆಗೆ ಹೊಡೆದು ಜೀವ ಬೆದರಿಕೆ ಒಡ್ಡಿ ಚರಂಡಿಗೆ ದೂಡಿ ಹಾಕಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ. ೧೧೫/೨೦೨೩ ಕಲಂ ೫೦೪,೩೨೩,೩೨೪,೫೦೬ ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Exit mobile version