Site icon Suddi Belthangady

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ಹರಿದ್ವಾರ ಶಾಖಾ ಮಠದಲ್ಲಿ ವಾರ್ಷಿಕ ವರ್ಧಂತಿ ಉತ್ಸವ- ಸಚಿವ ಮಾಂಕಾಳ್ ಎಸ್.ವೈದ್ಯ ಭಾಗಿ

ಉಜಿರೆ: ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರದ ಜಗದ್ಗುರು  ಪೀಠಾಧೀಶ ಸದ್ಗುರು ಶ್ರೀ  ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ  ನೇತೃತ್ವದಲ್ಲಿ ಕ್ಷೇತ್ರದ ಶಾಖಾ ಮಠ ಉತ್ತರಾ ಖಂಡದ ದೇವ ಭೂಮಿ ಹರಿದ್ವಾರ ಶಾಖಾ ಮಠದಲ್ಲಿ ನ.25 ರಂದು ವಾರ್ಷಿಕ ಉತ್ಸವ ನಡೆಯಲಿದೆ.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ  ಶ್ರೀ ಪಂಚದಶನಾಮ ಜುನಾ ಅಖಾಡ ಅಧ್ಯಕ್ಷ ಮಹಾಂತ್ ಪ್ರೇಮಗಿರಿ ಮಹಾರಾಜ್, ಉಪಾಧ್ಯಕ್ಷ ಮಹಾಂತ್ ವಿದ್ಯಾನಂದ ಸರಸ್ವತಿ ಮಹಾರಾಜ್, ಮಹಾ ಮಂಡಲೇಶ್ವರ 1008ಸ್ವಾಮಿ ವಿಜ್ಞಾನ ನಂದ ಸರಸ್ವತಿ ಮಹಾರಾಜ್, ಮಂಡಲೇಶ್ವರ 1008 ಶ್ರೀ ಸ್ವಾಮಿ ಲಲಿತಾನಂದ ಗಿರಿ ಮಹಾರಾಜ್, ಜಯರಾಮ ಆಶ್ರಮದ ಅಧ್ಯಕ್ಷ ಬ್ರಹ್ಮ ಸ್ವರೂಪಿ ಬ್ರಹ್ಮಚಾರಿ ಮಹಾರಾಜ್, ಶ್ರೀ ಮಹಾಂತ್ ದೇವಾನಂದ ಸರಸ್ವತಿ ಮಹಾರಾಜ್, ಮಹಾ ಮಂಡಲೇಶ್ವರ 1008ಶ್ರೀ ಸ್ವಾಮಿ ಯಮುನಾ ಪುರಿ ಮಹಾರಾಜ್, ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಕ್ಷೇತ್ರದಿಂದ ಪ್ರಕಟಣೆ ತಿಳಿಸಿದ್ದಾರೆ.

Exit mobile version