Site icon Suddi Belthangady

ಕಡಿರುದ್ಯಾವರದಲ್ಲಿ ಗ್ರಾಮ ಒನ್ ನಾಗರಿಕ‌ ಸೇವಾ ಕೇಂದ್ರ ಉದ್ಘಾಟನೆ

ಕಡಿರುದ್ಯಾವರ: ವಿವಿಧ ಸರಕಾರಿ ಸೇವೆಗಳ ಅರ್ಜಿ ಹಾಕಲು ಗ್ರಾಮ‌ಒನ್ ನಾಗರಿಕ ಸೇವಾ ಕೇಂದ್ರ ಇದರ ಉದ್ಘಾಟನೆ ಕಡಿರುದ್ಯಾವರದ ಹೇಡ್ಯದಲ್ಲಿ ನ.22 ರಂದು ನಡೆಯಿತು.

ಉದ್ಘಾಟನೆಯನ್ನು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ನೆರವೇರಿಸಿ ಶುಭ ಹಾರೈಸಿದರು.ಸುಂದರ ಪೂಜಾರಿ ಗುರಿಪಳ್ಳ ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್, ಲಾವಣ್ಯ ಮಂಜುನಾಥ ಕಾಮತ್, ಬಂಗಾಡಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ, ಕೃಷ್ಣಪ್ಪ ಪೂಜಾರಿ ಕಿಲ್ಲೂರ್, ವನಿತಾ ಸಾಲಿಯಾನ್, ಸತ್ಯನಾರಾಯಣ ಹೊಳ್ಳ ಕಾನರ್ಪ, ಯಶೋಧರ ಚಾರ್ಮಾಡಿ, ಸುನೀಲ್ ಕನ್ಯಾಡಿ, ತುಂಗಪ್ಪ ಪೂಜಾರಿ, ದಯಾನಂದ ಕಿಲ್ಲೂರ್, ಸದಾನಂದ ಪೂಜಾರಿ ಮಂಗಳೂರು, ಸುಧೀರ್ ದೇವಾಡಿಗ, ಸಿದ್ದಿಕ್ ಮಲೆಬೆಟ್ಟು, ವಿನಯ್ ಉಜಿರೆ ಮತ್ತು ಊರವರು ಉಪಸ್ಥಿತರಿದ್ದರು.

ಸಂತೋಷ್ ಕುಮಾರ್ ವಳಂಬ್ರ ಸ್ವಾಗತಿಸಿದರು.ಗುರುರಾಜ್ ಗುರಿಪಳ್ಳ ವಂದಿಸಿದರು.

Exit mobile version