Site icon Suddi Belthangady

ಬೆಳ್ತಂಗಡಿ: ಮಂಗಳೂರು ಉಪವಿಭಾಗದ ಅಬಕಾರಿ ಇಲಾಖೆಯ ಡಿವೈಎಸ್ ಪಿಯಾಗಿ ಸೌಮ್ಯಲತಾ ಪದನ್ನೋತಿ

ಬೆಳ್ತಂಗಡಿ: ಅಬಕಾರಿ ಇಲಾಖೆ ಡಿ.ವೈ. ಎಸ್.ಪಿ.ಯಾಗಿ ಸೌಮ್ಯಲತಾ ಸಂತೋಷ್ ಪದೋನ್ನತಿಗೊಂಡಿದ್ದಾರೆ. ಇವರು ಬೆಳ್ತಂಗಡಿ ಅಬಕಾರಿ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಅಬಕಾರಿ ನಿರೀಕ್ಷಕರಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ವಲಯ, ಶಿವಮೊಗ್ಗದ ಜಿಲ್ಲೆಯ ತೀರ್ಥಹಳ್ಳಿ ವಲಯ, ಉಡುಪಿ, ಬಂಟ್ವಾಳ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಮಂಗಳೂರು- ಉಡುಪಿ- ಶಿವಮೊಗ್ಗ- ಉತ್ತರಕರ್ನಾಟಕ ಕೊಡಗು ಜಿಲ್ಲೆ ವ್ಯಾಪ್ತಿಗೆ ಸೇರಿದ ಮಂಗಳೂರು ಉಪವಿಭಾಗ ಮಟ್ಟದಲ್ಲಿ ಅತ್ಯುತ್ತಮ ಅಬಕಾರಿ ನಿರೀಕ್ಷರ ಪ್ರಶಸ್ತಿಗೆ ಭಾಜನರಾಗಿದ್ದರು. ಇವರು ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ನೋಟರಿ ವಕೀಲರಾದ ಸಂತೋಷ್ ಕುಮಾರ್ ಲಾಯಿಲಾ ಅವರ ಪತ್ನಿಯಾಗಿದ್ದು, ಸಮೀಕ್ಷಾ ಹಾಗೂ ಸಂಪ್ರೀತ್ ಎಂಬ ಇಬ್ಬರು ಮಕ್ಕಳಿದ್ದಾರೆ.

Exit mobile version