Site icon Suddi Belthangady

ಶಿಬಾಜೆ: ಮರದ ಬೇಲಿ ತೆಗೆದು ಹಾಕಿ ಅಡಿಕೆ ಕೊಂಡು ಹೋದ ಆರೋಪ: ಈರ್ವರ ವಿರುದ್ಧ ಕೇಸು ದಾಖಲು

ಬೆಳ್ತಂಗಡಿ: ಮರದ ಬೇಲಿಯನ್ನು ತೆಗೆದು ಅಡಿಕೆ ಮರದಿಂದ ಅಡಿಕೆ ಕೊಂಡು ಹೋದದ್ದಲ್ಲದೆ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಈರ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿಬಾಜೆ ಗ್ರಾಮದ ಎಲಿಯಮ್ಮ(67ವ) ಎಂಬವರು ಶಿಬಾಜೆ ಗ್ರಾಮದಲ್ಲಿರುವ ಜಮೀನಿಗೆ ಅಳವಡಿಸಿದ ಮರದ ಬೇಲಿಯನ್ನು ಸಿ.ಎಮ್.ಉಲಹನನ್ ಮತ್ತು ಸಿ.ಎಮ್.ರಾಜು ಎಂಬವರು ತೆಗೆದು ಹಾಕಿದ್ದಾರೆ. ಸದ್ರಿ ಜಾಗ ತಮ್ಮದೆಂದು ಹೇಳಿ ಅದರಲ್ಲಿರುವ ಅಡಿಕೆ ಮರದಿಂದ ಅಡಿಕೆಗಳನ್ನು ತೆಗೆಯುತ್ತಿದ್ದಾರೆ.

ನ.16ರಂದು ಬೆಳಿಗ್ಗೆ ಎಲಿಯಮ್ಮ ಅವರು ಜಾಗಕ್ಕೆ ಹೋದ ಸಮಯ ಆಪಾದಿತರು ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜಾಗದಲ್ಲಿದ್ದ ಅಡಿಕೆ ಮರದಿಂದ ಬಿದ್ದ ಸುಮಾರು ಅರ್ಧ ಗೋಣಿ ಚೀಲದಷ್ಟು ಅಡಿಕೆಯನ್ನು ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ವಿಚಾರಿಸಿದಾಗ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 90/2023ರಂತೆ ಕಲಂ 447, 506 ಜೊತೆಗೆ 34 ಐಪಿ ಸಿಯಂತೆ ಪ್ರಕರಣ ದಾಖಲಾಗಿದೆ.

Exit mobile version