Site icon Suddi Belthangady

ಕೊಕ್ಕಡ: ಶ್ರೀ ರಾಮ ಸೇವಾ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷದ್ ವತಿಯಿಂದ 67ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹ

ಕೊಕ್ಕಡ:ಶ್ರೀ ರಾಮ ಸೇವಾ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷದ್ ವತಿಯಿಂದ 67ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹ ನ.18ರಂದು ಶ್ರೀ ಸೌತಡ್ಕ ಮಹಾಗಣಪತಿ ದೇವರರ ಸನ್ನಿಧಿಯಲ್ಲಿ ರಂಗಪೂಜೆ ಮೊದಲ್ಗೊಂಡು, ನ.19ರಿಂದ ನ.23ರ ತನಕ ಪ್ರತಿದಿನ ಕೊಕ್ಕಡ ಶ್ರಿ ರಾಮ ಭಜನಾ ಮಂದಿರದಲ್ಲಿ ಪ್ರಾರಂಭಗೊಂಡು ನಗರ ಸಂಚಾರದಿಂದ ಮುಕ್ತಾಯಗೊಳ್ಳುವುದು.

ನ.23ರಂದು ನಗರ ಭಜನಾ ಸಪ್ತಾಹದ ಕೊನೆಯ ದಿನ ಕೇಸರಿ ಗೆಳೆಯರ ಬಳಗ ಕೊಕ್ಕಡ ಇದರ ಸಂಯೋಗದೊಂದಿಗೆ ಕೇಸರಿ ಟೈಗರ್ಸ್ ಕೊಕ್ಕಡ ಇವರಿಂದ ಹುಲಿ ಕುಣಿತ ಜರಗಲಿದೆ ಹಾಗು ನ.23ರಂದು ಕೊಕ್ಕಡ ಓಂಕಾರ ಗೆಳೆಯರ ಬಳಗದಿಂದ ಆಹ್ವಾನಿತ ತಂಡದ ಕುಣಿತ ಭಜನೆ ಮತ್ತು ಸಂಜೆ 6ಗಂಟೆಗೆ ಆರಂಭಗೊಂಡು ಮರುದಿನ ಬೆಳಿಗ್ಗೆ ಭಜನೆ ಮುಕ್ತಾಯಗೊಳ್ಳುವುದು.

ನ.24ರಂದು ಬೆಳಿಗ್ಗೆ ಶ್ರೀ ರಾಮ ಮಂದಿರದಲ್ಲಿ ಭಜನಾ ಮಹೋತ್ಸವದ ಅಂಗವಾಗಿ ಓಕುಳಿಯಾಟ ನಡೆಯಲಿದೆ.

Exit mobile version