Site icon Suddi Belthangady

ದುಬೈ ಬಿಲ್ಲವ ಫ್ಯಾಮಿಲಿ ವತಿಯಿಂದ ಪೀತಾಬರ ಹೇರಾಜೆ ದಂಪತಿಗೆ ಗೌರವ

ಬೆಳ್ತಂಗಡಿ: ದುಬೈ ಪ್ರವಾಸದಲ್ಲಿರುವ ಬಿಲ್ಲವ ಸಮಾಜದ ಹಿರಿಯರು, ಪೋಲಿಸ್ ಇಲಾಖೆಯ ನಿವೃತ್ತ ದಕ್ಷ ಅಧಿಕಾರಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಪೀತಾಂಬರ ಹೇರಾಜೆ ದಂಪತಿಯನ್ನು ಬಿಲ್ಲವ ಫ್ಯಾಮಿಲಿ‌ ದುಬೈ ವತಿಯಿಂದ ಗೌರಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿ ಬೆಳೆದು ಬಂದ ದಾರಿ, ಅದರೊಂದಿಗೆ ಕ್ಷೇತ್ರದಿಂದ ನಡೆಯುವ ತಾಯಿಗೆ ಪ್ರಿಯವಾದ ಗೆಜ್ಜೆ ಸೇವೆಯ ಮುಖಾಂತರ ನಡೆಯುವ ಯಕ್ಷಗಾನದ ಬಗ್ಗೆ, ಇದಕ್ಕೆಲ್ಲ ಸಹಕರಿಸಿದ ದುಬೈ ಬಿಲ್ಲವರನ್ನು ಸ್ಮರಿಸುತ್ತಾ ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯುವ ಬಗ್ಗೆ ವಿವರವಾಗಿ ತಿಳಿಸಿದರು.

ಸಂಘಟನೆಯ ಅಧ್ಯಕ್ಷ ದೀಪಕ್ ಎಸ್.ಪಿ., ಮಾಜಿ ಅಧ್ಯಕ್ಷ ಜೀತೆಂದ್ರ ಸುವರ್ಣ, ಮೋಹನ್ ಅತ್ತಾವರ್, ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯರು ಉದ್ಯಮಿ ಸತೀಶ್ ಪೂಜಾರಿ ದುಬೈ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version