Site icon Suddi Belthangady

ಪೆರ್ಲ: ರಾಜರಾಜೇಶ್ವರಿ ಭಜನಾ ಮಂಡಳಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ದೀಪಾವಳಿ ಆಚರಣೆ

ಪೆರ್ಲ: ರಾಜರಾಜೇಶ್ವರಿ ಭಜನಾ ಮಂಡಳಿ ಪೆರ್ಲ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪೆರ್ಲ ಇದರ ಜಂಟಿ ಆಶ್ರಯದಲ್ಲಿ ನ.13 ರಂದು ಸಂಜೆ ದೀಪಾವಳಿ ಪ್ರಯುಕ್ತ ದೀಪೋತ್ಸವ ಕಾರ್ಯಕ್ರಮ ನಡೆಯಿತು.

ಭಾರತಾಂಬೆಯ ಚಿತ್ರದಾಕಾರದಲ್ಲಿ ದೀಪಗಳನ್ನು ಜೋಡಿಸಿ ಭಾರತಾಂಬೆಗೆ ನಮಿಸಿ ವಿಶಿಷ್ಟ ರೀತಿಯಲ್ಲಿ ಹಬ್ಬವನ್ನು ಸಂಭ್ರಮಿಸಿದರು.ಮಕ್ಕಳಿಗೆ ಮತ್ತು ಆಗಮಿಸಿದ ಊರವರಿಗೆ ಸಣ್ಣಪುಟ್ಟ ಮನರಂಜನೆಯ ಆಟಗಳನ್ನು ಆಯೋಜಕರು ಏರ್ಪಡಿಸಿದ್ದರು.

ಈ ಸಂಧರ್ಭದಲ್ಲಿ ಭಜನಾ ಮಂಡಳಿ ಅಧ್ಯಕ್ಷರಾದ ವಿನಯಚಂದ್ರ ಟಿ, ಗೌರವಾಧ್ಯಕ್ಷರಾದ ತ್ಯಾಂಪಣ್ಣ ಶೆಟ್ಟಿಗಾರ್, ಕೋಶಾಧಿಕಾರಿ ಕಿರಣ್ ಗೌಡ ಮತ್ತು ಊರಿನ ಹಿರಿಯರು ಉಪಸ್ಥಿತರಿದ್ದರು.

Exit mobile version