Site icon Suddi Belthangady

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶತನಮನ-ಶತಸನ್ಮಾನ ಕಾರ್ಯಕ್ರಮ

ಉಜಿರೆ: ಕೆ.ಎನ್.ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವದ 48ನೆಯ ಶತನಮನ – ಶತಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಶತನಮನ-ಶತಸನ್ಮಾನ ಕಾರ್ಯಕ್ರಮದ ಸಂಘಟಕ ಹರೀಶ್ ಕೆ.ಆದೂರು ಪ್ರಸ್ತಾವಿಕವಾಗಿ ಮಾತಾಡಿ, ಕೆ.ಎನ್ ಭಟ್ ಶಿರಾಡಿಪಾಲ್ ಸುಮಾರು 37 ವರ್ಷಗಳ ಹಿಂದೆ ಅನುಗ್ರಹ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು.

ಸನ್ಮಾನ ಕಾರ‍್ಯಕ್ರಮದ ಗೌರವ ಸಲಹೆಗಾರ ಕೆ.ಶ್ರೀಪತಿ ಭಟ್ ಶುಭ ಹಾರೈಸಿದರು.

ಕಾರ‍್ಯಕ್ರಮದಲ್ಲಿ ಕನ್ನಡ ಭಾಷೆ ಹಾಗೂ ಕಲೆಯ ಬೆಳವಣಿಗೆಗೆ ಸಹಕಾರ ನೀಡುವ ಅನುಗ್ರಹ ಪ್ರೌಢ ಶಾಲೆಯ ಕನ್ನಡ ಅಧ್ಯಾಪಕ ಪ್ರಭಾಕರ ಎನ್ ಶೆಟ್ಟಿ ಯವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಫಾ! ವಿಜಯ್ ಲೋಬೊ ರವರು ವಿದ್ಯಾರ್ಥಿಗಳು ಕೆ.ಎನ್ ಭಟ್ ರವರ ಜೀವನ ಚರಿತ್ರೆಯನ್ನು ಓದಿ ಆದರ್ಶ ವಿದ್ಯಾರ್ಥಿಗಳಾಗಲು ಕರೆ ನೀಡಿದರು.

Exit mobile version