Site icon Suddi Belthangady

ಬಂದಾರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ 20ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಮತ್ತು ಆಟೋಟ ಸ್ಪರ್ಧೆ

ಬಂದಾರು: ಶ್ರೀ ಸಿದ್ಧಿವಿನಾಯಕ ಯುವಕ ಮಂಡಲ ಪೆರ್ಲ ಬೈಪಾಡಿ ಬಂದಾರು ಗ್ರಾಮ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ 20ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಮತ್ತು ಆಟೋಟ ಸ್ಪರ್ಧೆಯು ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಇಲ್ಲಿ ನ.1ರಂದು ಜರುಗಿತು.

ಈ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿದ ದಿನೇಶ್ ಗೌಡ ಖಂಡಿಗ ಅಧ್ಯಕ್ಷರು ಗ್ರಾಮ ಪಂಚಾಯಿತಿ ಬಂದಾರು, ಶ್ರೀ ಬಾಲಕೃಷ್ಣ ಕೆ ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ, ಶ್ರೀಮತಿ ಭಾರತಿ ಕೋಡಿಯಲು ಸದಸ್ಯರು ಗ್ರಾಮ ಪಂಚಾಯತಿ ಬಂದಾರು, ಶ್ರೀಮತಿ ಅನಿತಾ ಕುರುಡಂಗೆ ಸದಸ್ಯರು ಗ್ರಾಮ ಪಂಚಾಯಿತಿ ಬಂದಾರು, ಲೋಹಿತ್ ಸೋಣಕುಮೇರು ಅಧ್ಯಕ್ಷರು, ರಾಧಾಕೃಷ್ಣ ಕಾರ್ಯದರ್ಶಿ, ಹಾಗೂ ಸರ್ವ ಸದಸ್ಯರು, ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.

Exit mobile version