Site icon Suddi Belthangady

ಶಿಶಿಲ: ಶ್ರೀ ಶಿಶಿಲೇಶ್ವರ ದೇವಸ್ಥಾನದ ನೂತನ ಅನ್ನಛತ್ರ ಉದ್ಘಾಟನೆ

ಶಿಶಿಲ: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಅನ್ನಛತ್ರದ ಉದ್ಘಾಟನಾ ಕಾರ್ಯಕ್ರಮವು ನ.6 ರಂದು ನಡೆಯಿತು.ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜರವರು ಉದ್ಘಾಟಿಸಿ, ಶುಭಹಾರೈಸಿದರು.

ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ ಬಳಿಕ ನೂತನ ಅನ್ನಛತ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.5 ಲಕ್ಷ ಅನುದಾನವನ್ನು ಯೋಜನಾಧಿಕಾರಿ ಸುರೇಂದ್ರ ರವರು ದೇವಸ್ಥಾನದ ವ್ಯವಸ್ಥಾನ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಮೂಡೆತ್ತಾಯರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅರ್ಚಕ ಸದಸ್ಯರಾದ ಪಿ ರಾಮ ಕಾರಂತ, ಸದಸ್ಯರಾದ ಕೆ.ರಾಧಕೃಷ್ಣ ಭಟ್, ಕೆ. ಆನಂದ ಪೂಜಾರಿ, ಚಂದ್ರಶೇಖ‌ರ್ ಗೌಡ ಧರ್ಮಸ್ಥಳ, ಎಂ.ಮೋಹನ್ ಜೋಷಿ, ಬಾಲಕೃಷ್ಣ ಎಂ.ಕೆ, ವೀಣಾ ಪಿ. ಉಪಾಧ್ಯಾಯ, ಉಮಾವತಿ ಜಿ.ಗೌಡ, ಪಂಚಾಯತ್ ಅಧ್ಯಕ್ಷ ಸುಧೀನ್ ಡಿ, ನಿಕಟಪೂರ್ವ ಅಧ್ಯಕ್ಷ ಸಂದೀಪ್, ಉಪಾಧ್ಯಕ್ಷ ಯತೀಶ್, ಶ್ರೀ ಧ.ಮ.ಗ್ರಾಮಾಭಿವೃದ್ಧಿ ಯೋಜನಾ ಮೇಲ್ವಿಚಾರಕರಾದ ಶಶಿಕಲಾ, ಸೇವಾಪ್ರತಿನಿಧಿ ಗಾಯತ್ರಿ ರವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version