Site icon Suddi Belthangady

‘ದೊಡ್ಮನೆ’ ತೆಂಗಿನ ಎಣ್ಣೆ ವಿವಿಧ ಬಗೆಯ ಸ್ಪೈಸಸ್, ಡ್ರೈಫ್ರೂಟ್ಸ್ ಮಳಿಗೆ ಶುಭಾರಂಭ- ನಾಗೇಶ್ ಕುಮಾರ್ ಗೌಡರಿಂದ ಚಾಲನೆ

ನಿಡ್ಲೆ: ಬೂಡುಜಾಲು ಉಳ್ಳಾಲ್ತಿ ದೈವಸ್ಥಾನದ ಬಳಿ ಧನುಷ್ ಕೇವಳ ಮಾಲೀಕತ್ವದ ದೊಡ್ಮನೆ ತೆಂಗಿನ ಎಣ್ಣೆ, ವಿವಿಧ ಬಗೆಯ ಪ್ರೈಸಸ್, ಡ್ರೈ ಫ್ರುಟ್ಸ್ ಮಳಿಗೆಯು ನ.5ರಂದು ಶುಭಾರಂಭಗೊಂಡಿದೆ

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ, ಕಾಶಿಬೆಟ್ಟು ಶ್ರೀ ಸ್ವಾಮಿ ಪ್ರಸಾದ್ ಅಸೋಸಿಯೇಟ್ಸ್ ನ ಅಧ್ಯಕ್ಷ ಕೆ.ಎಂ.ನಾಗೇಶ್ ಕುಮಾರ್ ಗೌಡ ರವರು ಮಳಿಗೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ದೊಡ್ಮನೆ ಮಾಲೀಕರಾದ ಧನುಷ್ ಕೇವಳ, NBF ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಡೈರೆಕ್ಟರ್ ನಿತ್ಯಾನಂದ ಕೇವಳ, ವಿಶ್ವನಾಥ ಗೌಡ, ನಿಡ್ಲೆ ಗ್ರಾಮ ಪಂಚಾಯತ್ ಸದಸ್ಯರಾದ ಹೇಮಾವತಿ ವಿಶ್ವನಾಥ್ ಗೌಡ, ಜಿನ್ನಪ್ಪ ಗೌಡ, ನಿವೃತ್ತ ಇಂಜಿನಿಯರ್ ಕೃಷ್ಣಕುಮಾರ್ ಕೇವಳ, ಕೇಶವ ಗೌಡ ಬೈಪಾಡಿ ಮುಂತಾದವರು ಉಪಸ್ಥಿತರಿದ್ದರು.

Exit mobile version