Site icon Suddi Belthangady

ಮಾಯ ಮಹೇಶ್ವರ ಭಜನಾ ಮಂಡಳಿ ವತಿಯಿಂದ ದೇವಸ್ಥಾನದ ವಠಾರದಲ್ಲಿ ಶ್ರಮದಾನ

ಬೆಳಾಲು: ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯ ವತಿಯಿಂದ ನ.15 ರಂದು ದೀಪಾವಳಿ ಹಬ್ಬದ ಅಂಗವಾಗಿ ನಡೆಯಲಿರುವ ಕ್ರೀಡಾಕೂಟ ಪ್ರಯುಕ್ತ ಶ್ರೀ ಮಾಯ ಮಹಾದೇವ ದೇವಸ್ಥಾನದ ವಠಾರವನ್ನು ನ.5 ರಂದು ಶ್ರಮದಾನದ ಮೂಲಕ ಸ್ವಚ್ಚಗೊಳಿಸಲಾಯಿತು.

ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ, ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ಗಣೇಶ್ ಕನಿಕ್ಕಿಲ, ಜತೆ ಕಾರ್ಯದರ್ಶಿ ಶೋಭಿತ್ ಪೆಲತ್ತಡಿ, ಭಜನಾ ಸಮಿತಿಯ ಸಂಚಾಲಕಿ ಭವಾನಿ ಮಾರ್ಪಲು, ಸಹ ಸಂಚಾಲಕ ಸುರೇಶ್ ಕನಿಕ್ಕಿಲ, ಮಹಿಳಾ ಸಮಿತಿಯ ಸಂಚಾಲಕಿ ಸುಜಾತಾ ಮಂಜುಶ್ರೀ, ಸಹ ಸಂಚಾಲಕಿ ವಸಂತಿ ಪರಾರಿ, ಕನ್ನಿಕ ಪದ್ಮ ಗೌಡ, ಕ್ರೀಡಾ ಸಮಿತಿಯ ಸಹ ಸಂಚಾಲಕ ರಂಜನ್ ಕುಮಾರ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದಿನೇಶ್ ಎಂ.ಕೆ, ಭಜನಾ ಮಂಡಳಿಯ ಪದಾಧಿಕಾರಿಗಳಾದ ನಾರಾಯಣ ಮಡಿವಾಳ, ಮೋಹನ ಪೂಜಾರಿ, ವಸಂತ ಬಜಕ್ಕಳ, ಲಲಿತ ಬೆಳಾಲು, ಭಜನಾ ಮಂಡಳಿಯ ಸದಸ್ಯರು, ಊರವರು ಭಾಗವಹಿಸಿ ಸಹಕರಿಸಿದರು.

Exit mobile version