Site icon Suddi Belthangady

ಜಿನಭಜನಾ ಸ್ಪರ್ಧೆಯ ಮಂಗಳೂರು ವಲಯ ಮಟ್ಟದಲ್ಲಿ ಅಳದಂಗಡಿ ತಂಡ ತೃತೀಯ ಸ್ಥಾನ

ವೇಣೂರು: ನ.5ರಂದು ವೇಣೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆಯಲ್ಲಿ ಮಂಗಳೂರು ವಲಯದಲ್ಲಿ ಅಳದಂಗಡಿಯ ಆದಿನಾಥ ಜಿನಭಜನಾ ತಂಡ ಮೂರನೇ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ತಂಡದಲ್ಲಿ ಅಕ್ಷರ್ ಜೈನ್ ಅಳದಂಗಡಿ, ಶುದ್ಧಿ ಜೈನ್ ಕುದ್ಯಾಡಿ, ಸುಕನ್ಯಾ ಜೈನ್ ಅಳದಂಗಡಿ, ಸನ್ನಿಧಿ ಜೈನ್ ಅಳದಂಗಡಿ, ವರ್ಷಾ ಜೈನ್ ಸುಲ್ಕೇರಿಮೊಗ್ರು ಇದ್ದರು.‌ ದರ್ಶನ್ ಜೈನ್ ಅಳದಂಗಡಿ ತಂಡಕ್ಕೆ ಮಾರ್ಗದರ್ಶನ ನೀಡಿದರು.

ಸಾಹಿತ್ಯವನ್ನು ಅಭ್ಯುದಯ್ ಜೈನ್ ಅಳದಂಗಡಿ ನೀಡಿದ್ದರು.‌ಮೂಡುಬಿದಿರೆ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವದಿಸಿದರು.ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ್ ಅಜಿಲರು, ಧರ್ಮಸ್ಥಳದ ಅನಿತಾ ಸುರೇಂದ್ರಕುಮಾರ್, ಪಂಜಿಕಲ್ಲು ಸುದರ್ಶನ್ ಜೈನ್ ಬಂಟ್ವಾಳ ಶುಭಹಾರೈಸಿದರು.

Exit mobile version